<p>ಸಾಗರ: ‘ಸುಳ್ಳುಗಳು ಪ್ರವಾಹದ ರೀತಿ ಹರಿಯುತ್ತಿರುವ ಈ ಹೊತ್ತಿನಲ್ಲಿ ಸತ್ಯದ ಪರವಾಗಿ ನಿಲ್ಲುವುದು ಮತ್ತು ಸತ್ಯವನ್ನೇ ಸ್ಥಾಪಿಸುವುದು ಹೇಗೆ ಎಂಬುದು ಮಾಧ್ಯಮಗಳ ಎದುರು ಇರುವ ಸವಾಲು’ ಎಂದು ಪತ್ರಕರ್ತ, ಲೇಖಕ ಅ.ರಾ.ಶ್ರೀನಿವಾಸ್ ಹೇಳಿದರು.</p>.<p>ಇಲ್ಲಿನ ಪತ್ರಿಕಾ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಾಧ್ಯಮದ ಹೊಸ ಹೆಜ್ಜೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.<br />‘ಬದಲಾದ ತಂತ್ರಜ್ಞಾನದಿಂದಾಗಿ ಮಾಧ್ಯಮಗಳ ವ್ಯಾಪ್ತಿ ವಿಸ್ತರಿಸಿದ್ದು, ಅವುಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳಲ್ಲಿ ಯಾವುದು ನಿಜ ಎಂದು ಗೊತ್ತಾಗಲಾರದ ಸ್ಥಿತಿ ನಿರ್ಮಾಣವಾಗಿದೆ.ನೀನು ಸತ್ಯ ಎಂದು ನಂಬಿದ್ದನ್ನು ಬರೆಯಲೇಬೇಕಾಗುತ್ತದೆ. ಈ ವಿಷಯದಲ್ಲಿ ನೀನು ಅಲ್ಪಸಂಖ್ಯಾತನಾದರೂ ಅಡ್ಡಿಯಿಲ್ಲ. ಏಕೆಂದರೆ ಸತ್ಯ ಯಾವತ್ತೂ ಸತ್ಯವೇ ಆಗಿರುತ್ತದೆ’ ಎಂಬ ಗಾಂಧೀಜಿಯವರ ಮಾತನ್ನು ನೆನಪಿಸಿದರು.</p>.<p>ಭಾರತದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ತೋರಿದ ಪತ್ರಿಕೋದ್ಯಮದ ಹಾದಿ ಇಂದಿಗೂ ಮಾದರಿಯಾಗುವಂತಿದೆ.ಪತ್ರಕರ್ತರು ಟೀಕೆ ಮಾಡಬಾರದು ಎಂಬುದು ಆರೋಗ್ಯಕರ ಚಿಂತನೆಯಲ್ಲ. ಪ್ರತಿ<br />ಯೊಂದು ಮಾಧ್ಯಮವೂ ತಮ್ಮದೇ ಆದ ಆಲೋಚನಾ ಕ್ರಮಗಳನ್ನು ಬೆಳೆಸಿ<br />ಕೊಳ್ಳುವುದು ಜೀವಂತಿಕೆಯ ಲಕ್ಷಣ. ಆರೋಗ್ಯಪೂರ್ಣ ಸಂವಾದ ಹುಟ್ಟು ಹಾಕುವುದು ಮಾಧ್ಯಮದ ಜವಾಬ್ದಾರಿ. ವಿಮರ್ಶೆ ಇಲ್ಲದ ಸಮಾಜ ನಿಂತ ನೀರಾಗಿ ಸ್ಥಗಿತಗೊಳ್ಳುತ್ತದೆ ಎಂದರು.</p>.<p>ಶಾಸಕ ಎಚ್.ಹಾಲಪ್ಪ ಹರತಾಳು, ‘ಇಂದಿಗೂ ನಿಖರವಾದ ಸುದ್ದಿ ನೀಡುವ ಜೊತೆಗೆ ಸುದ್ದಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವುದು ಮುದ್ರಣ ಮಾಧ್ಯಮ. ಈ ಕಾರಣಕ್ಕೆ ಆ ಮಾಧ್ಯಮದಲ್ಲಿ ಬಂದ ಸುದ್ದಿ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಜನರ ಅರಿವು, ಜ್ಞಾನದ ವಿಸ್ತರಣೆಯ ಕೆಲಸವೂ ಮುದ್ರಣ ಮಾಧ್ಯಮದಿಂದ ನಡೆಯುತ್ತಿದೆ’ ಎಂದು ವಿಶ್ಲೇಷಿಸಿದರು.</p>.<p>ಕಾರ್ಯಕ್ರಮವನ್ನು ಉದ್ಘಾಟಿಸಿದನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ನೈಜ ಸಂಗತಿಗಳಿಗೆ ಒತ್ತು ನೀಡುವ ಮೂಲಕ ಮಾಧ್ಯಮ ತನ್ನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ವಹಿಸಿದ ಪ್ರಮುಖ ಪಾತ್ರವನ್ನು ಮರೆಯುವಂತಿಲ್ಲ’ ಎಂದರು.</p>.<p>ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಗೋಪಾಲ್ ಯಡಗೆರೆ, ಶಿವಕುಮಾರ್ ಕೆ.ವಿ., ಹಿರಿಯ ಪತ್ರಕರ್ತರಾದ ಎಸ್.ವಿ.ಹಿತಕರ ಜೈನ್, ಪ್ರಶಾಂತ್ ಬಾಬು ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸುಜಲಾ ಜಿ.ಎನ್. ಅವರನ್ನು ಪುರಸ್ಕರಿಸಲಾಯಿತು.</p>.<p>ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಸದಸ್ಯ ಆರ್.ಶ್ರೀನಿವಾಸ್, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವೈದ್ಯನಾಥ್, ಗ್ರಾಮಾಂತರ ಉಪಾಧ್ಯಕ್ಷ ಎಚ್.ಬಿ.ರಾಘವೇಂದ್ರ ಇದ್ದರು.</p>.<p>ಲೋಕೇಶ್ ಕುಮಾರ್ ಸ್ವಾಗತಿಸಿದರು. ರವಿ ನಾಯ್ಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮ್ರಾನ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಸುಳ್ಳುಗಳು ಪ್ರವಾಹದ ರೀತಿ ಹರಿಯುತ್ತಿರುವ ಈ ಹೊತ್ತಿನಲ್ಲಿ ಸತ್ಯದ ಪರವಾಗಿ ನಿಲ್ಲುವುದು ಮತ್ತು ಸತ್ಯವನ್ನೇ ಸ್ಥಾಪಿಸುವುದು ಹೇಗೆ ಎಂಬುದು ಮಾಧ್ಯಮಗಳ ಎದುರು ಇರುವ ಸವಾಲು’ ಎಂದು ಪತ್ರಕರ್ತ, ಲೇಖಕ ಅ.ರಾ.ಶ್ರೀನಿವಾಸ್ ಹೇಳಿದರು.</p>.<p>ಇಲ್ಲಿನ ಪತ್ರಿಕಾ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಾಧ್ಯಮದ ಹೊಸ ಹೆಜ್ಜೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.<br />‘ಬದಲಾದ ತಂತ್ರಜ್ಞಾನದಿಂದಾಗಿ ಮಾಧ್ಯಮಗಳ ವ್ಯಾಪ್ತಿ ವಿಸ್ತರಿಸಿದ್ದು, ಅವುಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳಲ್ಲಿ ಯಾವುದು ನಿಜ ಎಂದು ಗೊತ್ತಾಗಲಾರದ ಸ್ಥಿತಿ ನಿರ್ಮಾಣವಾಗಿದೆ.ನೀನು ಸತ್ಯ ಎಂದು ನಂಬಿದ್ದನ್ನು ಬರೆಯಲೇಬೇಕಾಗುತ್ತದೆ. ಈ ವಿಷಯದಲ್ಲಿ ನೀನು ಅಲ್ಪಸಂಖ್ಯಾತನಾದರೂ ಅಡ್ಡಿಯಿಲ್ಲ. ಏಕೆಂದರೆ ಸತ್ಯ ಯಾವತ್ತೂ ಸತ್ಯವೇ ಆಗಿರುತ್ತದೆ’ ಎಂಬ ಗಾಂಧೀಜಿಯವರ ಮಾತನ್ನು ನೆನಪಿಸಿದರು.</p>.<p>ಭಾರತದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ತೋರಿದ ಪತ್ರಿಕೋದ್ಯಮದ ಹಾದಿ ಇಂದಿಗೂ ಮಾದರಿಯಾಗುವಂತಿದೆ.ಪತ್ರಕರ್ತರು ಟೀಕೆ ಮಾಡಬಾರದು ಎಂಬುದು ಆರೋಗ್ಯಕರ ಚಿಂತನೆಯಲ್ಲ. ಪ್ರತಿ<br />ಯೊಂದು ಮಾಧ್ಯಮವೂ ತಮ್ಮದೇ ಆದ ಆಲೋಚನಾ ಕ್ರಮಗಳನ್ನು ಬೆಳೆಸಿ<br />ಕೊಳ್ಳುವುದು ಜೀವಂತಿಕೆಯ ಲಕ್ಷಣ. ಆರೋಗ್ಯಪೂರ್ಣ ಸಂವಾದ ಹುಟ್ಟು ಹಾಕುವುದು ಮಾಧ್ಯಮದ ಜವಾಬ್ದಾರಿ. ವಿಮರ್ಶೆ ಇಲ್ಲದ ಸಮಾಜ ನಿಂತ ನೀರಾಗಿ ಸ್ಥಗಿತಗೊಳ್ಳುತ್ತದೆ ಎಂದರು.</p>.<p>ಶಾಸಕ ಎಚ್.ಹಾಲಪ್ಪ ಹರತಾಳು, ‘ಇಂದಿಗೂ ನಿಖರವಾದ ಸುದ್ದಿ ನೀಡುವ ಜೊತೆಗೆ ಸುದ್ದಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವುದು ಮುದ್ರಣ ಮಾಧ್ಯಮ. ಈ ಕಾರಣಕ್ಕೆ ಆ ಮಾಧ್ಯಮದಲ್ಲಿ ಬಂದ ಸುದ್ದಿ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಜನರ ಅರಿವು, ಜ್ಞಾನದ ವಿಸ್ತರಣೆಯ ಕೆಲಸವೂ ಮುದ್ರಣ ಮಾಧ್ಯಮದಿಂದ ನಡೆಯುತ್ತಿದೆ’ ಎಂದು ವಿಶ್ಲೇಷಿಸಿದರು.</p>.<p>ಕಾರ್ಯಕ್ರಮವನ್ನು ಉದ್ಘಾಟಿಸಿದನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ನೈಜ ಸಂಗತಿಗಳಿಗೆ ಒತ್ತು ನೀಡುವ ಮೂಲಕ ಮಾಧ್ಯಮ ತನ್ನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ವಹಿಸಿದ ಪ್ರಮುಖ ಪಾತ್ರವನ್ನು ಮರೆಯುವಂತಿಲ್ಲ’ ಎಂದರು.</p>.<p>ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಗೋಪಾಲ್ ಯಡಗೆರೆ, ಶಿವಕುಮಾರ್ ಕೆ.ವಿ., ಹಿರಿಯ ಪತ್ರಕರ್ತರಾದ ಎಸ್.ವಿ.ಹಿತಕರ ಜೈನ್, ಪ್ರಶಾಂತ್ ಬಾಬು ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸುಜಲಾ ಜಿ.ಎನ್. ಅವರನ್ನು ಪುರಸ್ಕರಿಸಲಾಯಿತು.</p>.<p>ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಸದಸ್ಯ ಆರ್.ಶ್ರೀನಿವಾಸ್, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವೈದ್ಯನಾಥ್, ಗ್ರಾಮಾಂತರ ಉಪಾಧ್ಯಕ್ಷ ಎಚ್.ಬಿ.ರಾಘವೇಂದ್ರ ಇದ್ದರು.</p>.<p>ಲೋಕೇಶ್ ಕುಮಾರ್ ಸ್ವಾಗತಿಸಿದರು. ರವಿ ನಾಯ್ಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮ್ರಾನ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>