‘ಮಾರ್ಚ್ ತಿಂಗಳು ಪ್ರಾರಂಭವಾಗುತ್ತಿದಂತೆ ಕಾಡಿನಲ್ಲಿರುವ ಕೆರೆಗಳ ನೀರು ಖಾಲಿಯಾಗಿ, ಕಾಡು ಪ್ರಾಣಿಗಳು ನೀರಿಗಾಗಿ ಊರಿಗೆ ಬರುತ್ತವೆ. ಹೀಗೆ ಬಂದ ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಆಗ ಅದು ಕೆಸರಿನಲ್ಲಿ ಸಿಲುಕಿಕೊಂಡಿದೆ. ಜಿಂಕೆ ಬಹಳ ಬೇಗ ಗಾಬರಿಗೊಳ್ಳುತ್ತದೆ ಮತ್ತು ಹೃದಯಾಘಾತಕ್ಕೆ ಒಳಗಾಗುವ ಪ್ರಾಣಿಯಾಗಿದೆ. ನಾಯಿಗಳು ಅಟ್ಟಿಸಿಕೊಂಡ ಬಂದಿದ್ದರಿಂದ ಗಾಬರಿಗೊಂಡಿತ್ತು. ಚಿಕಿತ್ಸೆ ನೀಡಿದರೂ ಸ್ಪಂದಿಸಲಿಲ್ಲ’ ಎಂದು ಆನವಟ್ಟಿಯ ಉಪ ಅರಣ್ಯ ಅಧಿಕಾರಿ ಜಾವಿದ್ ಮಾಹಿತಿ ನೀಡಿದರು.