ಕಾಯಂ ನೌಕರರು ಹೊರತುಪಡಿಸಿ, ಮಿಕ್ಕೆಲ್ಲ ಕಾರ್ಮಿಕರು ಕಸ ವಿಲೇವಾರಿ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ನಗರದಲ್ಲಿ ಕಸದ ಸಮಸ್ಯೆ ಬಿಗಡಾಯಿಸಿದೆ. ಎಲ್ಲ ಇದ್ದರೂ ಸರಿಯಾಗಿ ಕಸ ವಿಲೇವಾರಿಯಾಗಲ್ಲ ಎಂಬ ಆರೋಪ ಇದ್ದೇ ಇದೆ. ಈ ನಡುವೆ ನೇರ ಪಾವತಿ ಕಾರ್ಮಿಕರು ಮುಷ್ಕರ ಹೂಡಿರುವುದು ಪಾಲಿಕೆ ಅಧಿಕಾರಿಗಳಿಗೂ ತಲೆ ನೋವು ತಂದಿದೆ.