ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ತ್ಯಾವರೆಕೊಪ್ಪಕ್ಕೆ ಎರಡು ಸಿಂಹಗಳ ಆಗಮನ

Last Updated 15 ಜುಲೈ 2021, 14:44 IST
ಅಕ್ಷರ ಗಾತ್ರ

ಶಿವಮೊಗ್ಗ: ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಸಿಂಹಗಳ ಆಗಮನವಾಗಿದೆ. ಪ್ರಸ್ತುತ ನಾಲ್ಕು ಸಿಂಹಗಳಿದ್ದವು. ಹೊಸ ಸಿಂಹಗಳ ಸೇರ್ಪಡೆಯಿಂದ ಧಾಮದ ಸಿಂಹಗಳ ಸಂಖ್ಯೆ 6ಕ್ಕೇರಿದೆ.

ಏಳು ವರ್ಷದ ಸುಚಿತ್ರಾ, ಯಶವಂತ ಜೋಡಿ ಆಗಮನದಿಂದ ಸಂತಾನಾಭಿವೃದ್ಧಿಯ ನಿರೀಕ್ಷೆ ಮೂಡಿದೆ. 13 ವರ್ಷಗಳಿಂದ ಧಾಮದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆದಿಲ್ಲ. ಚಾಮುಂಡಿ ಹುಲಿಗೆ ಜನಿಸಿದ್ದ ವಿಜಯದಶಮಿ ಹುಲಿಯೇ ಕೊನೆಯ ಮರಿ.

‘ಬನ್ನೇರುಘಟ್ಟದಿಂದ ಎರಡು ಸಿಂಹಗಳನ್ನು ತರಲಾಗಿದೆ. ಅವುಗಳ ಹೊಂದಾಣಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಧಾಮದ ಡಿಸಿಎಫ್‌ ಮುಕುಂದ್ ಚಂದ್’ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT