ರಿಪ್ಪನ್ಪೇಟೆ: ‘ಶುಭ ಸಂಕಲ್ಪಗಳನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ಪ್ರಗತಿ ಪಥದಲ್ಲಿ ಸಾಗಬೇಕು. ಆ ನಿಟ್ಟಿನಲ್ಲಿ ಹೊಸಜೀವನ ರೂಪಿಸಿಕೊಳ್ಳಬೇಕು. ಬದುಕಿನಲ್ಲಿ ಅಜ್ಞಾನದ ಕತ್ತಲೆ ಆವರಿಸಿದಾಗ ಕುಗ್ಗದೆ ಜ್ಞಾನವೆಂಬ ದೀಪದ ಬೆಳಕನ್ನು ಆಶ್ರಯಿಸಿ ಮುನ್ನಡೆಯಬೇಕು. ಆಗಮಾತ್ರ ಸುಗಮ ದಾರಿ ಸಿಗಲಿದೆ’ ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.