‘ಮುಂದಿನ ಹಳ್ಳಿಗಳ ಅನುಕೂಲಕ್ಕಾಗಿ ಗೇಟ್ ತೆರೆದರೇ, ಆ ಹಳ್ಳಿ ತಲುಪುವ ಮುಂಚೆ ನೀರು ಖಾಲಿಯಾಗುತ್ತದೆ. ಅಧಿಕಾರಿಗಳು ಮುಂದಾಲೋಚನೆ ಮಾಡದೇ ಗೇಟ್ ತೆರೆದರೆ, ನೀರು ನಮ್ಮ ಬಳಕೆಗೂ ಸಿಗುವುದಿಲ್ಲ. ಮುಂದಿನ ಗ್ರಾಮಗಳ ಬಳಕೆಗೂ ಸಿಗುವುದಿಲ್ಲ. ಹಾಗಾಗಿ ಹತ್ತಾರು ಹಳ್ಳಿ ಬಳಕೆ ಮಾಡಿಕೊಳ್ಳುತ್ತಿರುವ ಅಚ್ಚುಕಟ್ಟುದಾರರಿಗೆ ತೊಂದರೆ ನೀಡದೇ. ಮೂಗುರು ಸುತ್ತಲ ಗ್ರಾಮಗಳ ಜನರ ಬಳಕೆಗೆ ಬಿಡಬೇಕು’ ಎಂದು ಗ್ರಾಮಸ್ಥರಾದ ಪ್ರಸನ್ನ ಕುಮಾರ್, ರಾಜು ಗೌಡ, ಗಿರೀಶ್, ಶಿವರುದ್ರಗೌಡ, ಎಚ್.ಆರ್. ನಾಗರಾಜ, ಎಲ್.ಜಿ. ಮಾಲತೇಶ್, ಶಿವಲಿಂಗೇಗೌಡ, ರವಿಕಿರಣ ಕುಬಟೂರು ಮನವಿ ಮಾಡಿದರು.