ವರ್ಷದ ಹಿಂದೆ ಜಿಲ್ಲಾಡಳಿತಕ್ಕೆ ದೂರು
‘ವಿನಾಯಕ ಚಿತ್ರಮಂದಿರ ಜಂಟಿ ಹಕ್ಕುದಾರಿಕೆಯಲ್ಲಿ ನಡೆಯುತ್ತಿದೆ. ಪರವಾನಗಿ 2021ರ ಡಿಸೆಂಬರ್ 31ರಂದು ನವೀಕರಣಗೊಂಡಿದೆ. ನನ್ನ ಸಹೋದರ ರವೀಂದ್ರ ಕಾಮತ್ ಪರವಾನಗಿ ನವೀಕರಣಕ್ಕಾಗಿ ವಿವಿಧ ಇಲಾಖೆಗಳ ನಿರಾಪೇಕ್ಷಣ ಪತ್ರ ಸಲ್ಲಿಸಿದ್ದಾರೆ. ಚಿತ್ರಮಂದಿರ ಕಟ್ಟಡ ಪರಿಶೀಲಿಸದೆ ನಿರಾಪೇಕ್ಷಣ ಪತ್ರವನ್ನು ಇಲಾಖೆ ನೀಡಿದೆ. ಆದರೆ, ಆಸನಗಳು ಯಾವುದೂ ಸರಿ ಇಲ್ಲ. ಚಿತ್ರಮಂದಿರದ ಗೋಡೆ, ಶೌಚಾಲಯ, ಆಡಿಟೋರಿಯಂ, ಚಾವಣಿ ಶಿಥಿಲಾವಸ್ಥೆ ತಲುಪಿದ್ದು, ಪ್ರೇಕ್ಷಕರ ತಲೆಯ ಮೇಲೆ ಬೀಳುವ ಪರಿಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ಅನಾಹುತವಾದಲ್ಲಿ ಸಂಬಂಧಪಟ್ಟ ಇಲಾಖೆ ನೇರ ಹೊಣೆಯಾಗುತ್ತದೆ’ ಎಂದು ಕೆ.ಗಣೇಶ್ ಕಾಮತ್ ಜಿಲ್ಲಾಡಳಿತಕ್ಕೆ 2022ರ ಮೇ 13ರಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.