ಶಿವಮೊಗ್ಗ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಗ್ಗಿ ಅರಣ್ಯ ಪ್ರದೇಶ ವ್ಯಾಪ್ತಿಯ ಹುಳಿಹೊಸಹಳ್ಳಿ–ವಡ್ಡರಹಟ್ಟಿಯಲ್ಲಿ ಶನಿವಾರ ಅರಣ್ಯ ಇಲಾಖೆಯ ತಂಡ ಸೆರೆಹಿಡಿದ ಕಾಡಾನೆಯನ್ನು ಭಾನುವಾರ ಸಮೀಪದ ಸಕ್ರೆಬೈಲು ಬಿಡಾರಕ್ಕೆ ಲಾರಿ ಮೂಲಕ ತರಲಾಯಿತು.
ಕಾಡಾನೆಯನ್ನು ಕ್ರಾಲ್ನ ಒಳಗೆ ಬಂಧಿಸಿ ಕ್ರಾಲ್ಗೆ ಮರದ ದಿಮ್ಮಿಗಳನ್ನು ಜೋಡಿಸಲು ಕೊಡಗಿನ ಮತ್ತಿಗೋಡು ಆನೆ ಬಿಡಾರದ ಅಭಿಮನ್ಯು ಮತ್ತು ಕೃಷ್ಣ ಆನೆಗಳು ಹರಸಾಹಸ ಪಟ್ಟವು.
ಒಟ್ಟು ಮೂರು ಕಾಡಾನೆಗಳು ಚನ್ನಗಿರಿ ತಾಲ್ಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದು, ಹೊನ್ನಾಳಿ ಸುತ್ತಮುತ್ತ ಮೂವರನ್ನು ಗಾಯಗೊಳಿಸಿರುವ ಪುಂಡಾನೆಪಳಗಿಸಲು ಸಕ್ರೆಬೈಲು ಆನೆ ಬಿಡಾರಕ್ಕೆ ಪಳಗಿಸಲು ತರಲಾಗಿದೆ.