ರಿಪ್ಪನ್ಪೇಟೆ: ಸಮೀಪದ ಕೆಂಚನಾಲದಲ್ಲಿ ಬುಧವಾರ ನಡೆದ ಬೇಸಿಗೆ ಮಾರಿಕಾಂಬಾ ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಜಾತ್ರೆಯ ಅಂಗವಾಗಿ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ 8ರಿಂದ ಪ್ರಾರಂಭವಾದ ನಡೆದ ವಿಶೇಷ ಪೂಜೆಗೆ ಸುತ್ತಮುತ್ತಲಿನ ಗ್ರಾಮಸ್ಥರು, ಜಿಲ್ಲೆ ಹೊರ ಜಿಲ್ಲೆಗಳಿಂದ ಭಕ್ತರು ಸಂಭ್ರಮ ಸಡಗರದಿಂದ ತಂಡೋಪತಂಡವಾಗಿ ಬಂದು ತಮ್ಮ ಹರಕೆ ಕಾಣಿಕೆ, ಹಣ್ಣುಕಾಯಿಯನ್ನು ಆರ್ಪಿಸಿದರು. ಹರಕೆ ಹೊತ್ತ ಭಕ್ತರು ಕೋಳಿಗಳನ್ನು ದೇವಳದ ಆವರಣದಲ್ಲಿ ಹಾರಿ ಬಿಡುವ ದೃಶ್ಯ ಸಾಮಾನ್ಯವಾಗಿತ್ತು.
ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ. ಬೇಸಿಗೆಯ ಶೂನ್ಯಮಾಸದಲ್ಲಿ ಮರದ ಉತ್ಸವ ಮೂರ್ತಿಗೆ ಬೆಳ್ಳಿ ಕವಚ ಧರಿಸಿ ಪೂಜೆ ಸಲ್ಲಿಸಿದರು.
ಹರಕೆ ಹೊತ್ತ ಕೆಲವು ಭಕ್ತರು ಬೇವು -ಲಕ್ಕಿಗಿಡದ ತೊಗಟೆಯ ಉಡುಗೆತೊಟ್ಟು ದೇವಸ್ಥಾನಕ್ಕೆ ಪ್ರದಕ್ಷಣೆ ಹಾಕಿ ಕಷ್ಟ-ಕಾರ್ಪಣ್ಯಗಳಿಂದ ದೂರ ಮಾಡುವಂತೆ ಪ್ರಾರ್ಥಿಸಿದರು.