ನಿವೃತ್ತ ಅಧಿಕಾರಿ ಬಲದೇವಕೃಷ್ಣ, ಹಿರಿಯ ಮುಖಂಡ ರವಿಕುಮಾರ್ ಅವರು ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಕಳೆದ ಮೂರು ಬಾರಿ ಟಿಕೆಟ್ಗೆ ಪ್ರಯತ್ನಿಸಿ ಕೊನೆಯ ಹಂತದಲ್ಲಿ ವಂಚಿತರಾಗಿದ್ದರು. ಭೋವಿ ಸಮಾಜದ ಅವರಿಗೆ ಈ ಬಾರಿ ಟಿಕೆಟ್ ಖಚಿತ ಎಂದು ಪಕ್ಷದ ಮೂಲಗಳೇ ಖಚಿತಪಡಿಸಿದ್ದವು. ಆದರೆ, ಎಂದೂ ರಾಜಕೀಯದಲ್ಲಿ ಗುರುತಿಸಿಕೊಳ್ಳದ, ವೈದ್ಯ ವೃತ್ತಿಯಲ್ಲಿರುವ ಡಾ.ಶ್ರೀನಿವಾಸ್ ಅವರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ, ರವಿಕುಮಾರ್ ಈ ಬಾರಿ ಬಂಡಾಯ ಏಳುವ ಸಾಧ್ಯತೆ ಇದೆ.