<p>ಶತಮಾನಗಳ ಇತಿಹಾಸ ಹೊತ್ತಿರುವ ಗ್ರಾಮ ಮೂರು ಬಾರಿ ಬದಲಾಗಿದ್ದರೂ ತನ್ನ ಹೆಸರಿನ ಮಹಿಮೆ ಮಾತ್ರದಿಂದಲೇ ಬೆಳೆದಿರುವ ಭದ್ರಾವತಿ ತಾಲ್ಲೂಕು `ದೇವ ನರಸೀಪುರ~ ವಿಶಿಷ್ಟ ಐತಿಹ್ಯ ತೆರೆದಿಡುತ್ತದೆ.<br /> ನಗರದಿಂದ ಸುಮಾರು ಐದು ಕಿ.ಮೀ. ತರೀಕೆರೆ ರಸ್ತೆಯಲ್ಲಿನ ಒಳದಾರಿಯಲ್ಲಿ ಹಾದು ಹೋದರೆ ಸಿಗುವ `ದೇವರನರಸೀಪುರ~ ಅಂತರಗಂಗೆ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ.<br /> <br /> <strong>ಹೆಸರಿನ ಜತೆಗಿನ ಇತಿಹಾಸ</strong><br /> ಭದ್ರಾವತಿ ಹಳೇನಗರ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದ ಜನರು ಈ ಗ್ರಾಮದಲ್ಲಿ ನೆಲೆಸಿ ಕೆರೆ, ಕಟ್ಟೆ, ದೇವಾಲಯವನ್ನು ಇಲ್ಲಿ ನಿರ್ಮಿಸಿಕೊಂಡು ಬದುಕು ನಡೆಸಿದ್ದರು. ಹೀಗಾಗಿ, ಊರಿಗೆ `ದೇವರು~ ನಿರ್ಮಿಸಿದ ಮಂದಿ ವಾಸವಿದ್ದ ಕಾರಣ ಅದರೊಂದಿಗೆ `ನರಸೀಪುರ~ ಸೇರ್ಪಡೆಯಾಯಿತು ಎನ್ನುತ್ತಾರೆ ಗ್ರಾಮದ ಹಿರಿಯ ಟಿ. ದಾಸಪ್ಪ.<br /> <br /> ಮೂರು ಬಾರಿ ಬದಲಾವಣೆ ಕಂಡಿರುವ ಊರು ಈಗಲೂ ಹಲವು ಮಹತ್ವ ವಿಷಯವನ್ನು ತನ್ನ ಒಡಲಲ್ಲಿ ಹೊತ್ತಿದೆ. ಹಿಂದೆ ನಾವು ಚಿಕ್ಕವರಿದ್ದಾಗ ಬಾಳ್ವೆ, ಬದುಕು ನಡೆಸಿದ ಊರು ಈಗ ಸಮೃದ್ಧ ತೋಟ, ಜಮೀನು ಆಗಿದೆ ಎನ್ನುತ್ತಾರೆ ಗುರುಸಿದ್ದಪ್ಪ.<br /> <br /> <strong>ಊರು ಬೆಳೆದ ಪರಿ</strong><br /> ಒಂದು ಬಾರಿ ರೋಗ-ರುಜಿನಗಳ ಕಾಟ ಹೆಚ್ಚಾದ ಕಾರಣ, ಮತ್ತೊಂದು ಬಾರಿ ಭದ್ರಾ ನಾಲೆ ತಿರುವು ಪಡೆದು ಹಾದು ಹೋದ ಸಂದರ್ಭದಲ್ಲಿ ಗ್ರಾಮದ ಸ್ಥಳಾಂತರ ನಡೆಯಿತು. <br /> <br /> ದೊಡ್ಡಮನೆ ಹನುಮಣ್ಣ, ಪಟೇಲ್ ಚಂದಪ್ಪ, ಚಿಕ್ಕಪ್ಪರ ನಂಜುಂಡಪ್ಪ, ವೀರಭದ್ರಪ್ಪ ಹೀಗೆ ಹತ್ತು ಹಲವು ಮಂದಿಯ ಕುಟುಂಬದಿಂದ ಬೆಳೆದ ಊರಿಗೆ ಮೂಲ ನೆಲೆ ನೀಡಿದವರು ಲಿಂಗಾಯತರು, ಭೋವಿಗಳು ಹಾಗೂ ಇನ್ನಿತರ ಸಣ್ಣ ಪುಟ್ಟ ಸಮುದಾಯ ಜನರು.<br /> <br /> ಕಾರ್ಖಾನೆ, ಜಮೀನು ಸಾಗುವಳಿ ಪ್ರಮಾಣ ಹೆಚ್ಚಾದಂತೆ ಒಕ್ಕಲಿಗರು, ಕುರುಬರು, ಲಂಬಾಣಿ... ಹೀಗೆ ಹತ್ತು ಹಲವು ಸಮುದಾಯ ಮಂದಿ ಸೇರಿ ಬೆಳೆಸಿದ ಊರಿನಲ್ಲಿ ಈಗ ಬರೋಬರಿ 1,000 ಮನೆಯಿದ್ದು, ನರಸೀಪುರ ಕ್ಯಾಂಪ್ ಎಂಬ ಸಣ್ಣ ಊರು ಸಹ ನೆಲೆ ನಿಂತಿದೆ.<br /> <br /> <strong>ಎಡಗೈ ಆಶೀರ್ವಾದದ ರಂಗನಾಥಸ್ವಾಮಿ</strong><br /> ಮುಜರಾಯಿ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ರಂಗನಾಥ ಸ್ವಾಮಿ ದೇವಾಲಯ ಗ್ರಾಮದ ಮುಖ್ಯ ದೇವಾಲಯದಲ್ಲಿ ಒಂದಾಗಿದೆ. ಇದು ಸೇರಿದಂತೆ ಈಶ್ವರ ದೇವಾಲಯ, ಅಂತಗಘಟ್ಟಮ್ಮ, ಹುಚ್ಚುರಾಯಸ್ವಾಮಿ, ಕರಿಯಮ್ಮ, ದಾನವಾಸ್ತಮ್ಮ, ಕೃಷ್ಣ, ಎಲ್ಲಮ್ಮ ದೇವಾಲಯಗಳು ಗ್ರಾಮದಲ್ಲಿ ನೆಲೆಯೂರಿವೆ.<br /> <br /> ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ನಿರ್ಮಿಸಲು ಬಂದ ಶಿಲ್ಪಿಗಳು ದೇವರ ಪೂಜೆಗಾಗಿ ಪ್ರತಿಷ್ಠಾಪಿಸಿದ್ದ ರಂಗನಾಥಸ್ವಾಮಿ. ಇದು ಮೊದಲು ಊರ ಹೊರಗೆ ನೆಲೆ ನಿಂತಿತ್ತು. ಕಾಲಾನಂತರ ಊರು ಬದಲಾದಂತೆ ಈಗ ಊರಿನ ಮುಖ್ಯಭಾಗದಲ್ಲಿ ಇದನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಲಾಗಿದೆ.<br /> <br /> ಈ ದೇವರ ವೈಶಿಷ್ಟ್ಯ ಎಡಗೈಯಲ್ಲಿ ಆಶೀರ್ವಾದ ಮಾಡುತ್ತಿರುವುದು, ಬಲಗೈ ಭೂಮಿ ಕಡೆಗೆ ಇಳೆ ಬಿಟ್ಟಿರುವುದು. ಇದನ್ನು ಅಭಿವೃದ್ಧಿ ಮಾಡುವಲ್ಲಿ ವೀರಭದ್ರಪ್ಪ ಅವರ ಶ್ರಮವಿದೆ ಎಂಬುದು ಜನರ ಅಭಿಪ್ರಾಯ.<br /> <br /> ಇಲ್ಲಿ ದಸರಾ ಸಂದರ್ಭದಲ್ಲಿ ಅದ್ದೂರಿ ಜಾತ್ರೆ ನಡೆಯಲಿದೆ. ದೇವಾಲಯ ಮುಂಭಾಗದಲ್ಲಿ `ಅಂಬು~ ಒಡೆಯುವ ಕಾರ್ಯಕ್ರಮ ಸಹ ನಡೆಯಲಿದ್ದು, ಸುತ್ತಲೂರಿನ ಸಹಸ್ರಾರು ಮಂದಿ ಭಾಗವಹಿಸುತ್ತಾರೆ ಎನ್ನುತ್ತಾರೆ ಅಪ್ಪಾಜಿ. <br /> <br /> <strong> ಶಾಲೆಯ ಭಾಗ್ಯ</strong><br /> ಈ ಗ್ರಾಮಕ್ಕೆ 1960ರಲ್ಲಿ ಪ್ರಾಥಮಿಕ ಶಾಲೆ ಭಾಗ್ಯ ದೊರೆಯಿತು. 1962ರಲ್ಲಿ ಕಟ್ಟಡ ನಿರ್ಮಿಸಲಾಯಿತು. ತದನಂತರ ವರ್ಷದಲ್ಲಿ ಮಾಧ್ಯಮಿಕ ಶಾಲೆ ತೀರಾ ಇತ್ತೀಚೆಗೆ ಪ್ರೌಢಶಾಲೆ ಆರಂಭವಾಗಿದೆ.<br /> <br /> ಶಾಲಾ ಕಟ್ಟಡ ಹಾಳಾಗಿದ್ದು ಅದಕ್ಕೆ ಹೊಸತನ ತುಂಬುವ ಕೆಲಸ ನಡೆಯಬೇಕಿದೆ ಎನ್ನುತ್ತಾರೆ ಗ್ರಾಮದ ಯುವಕ ಕುಮಾರ್. ಪ್ರೌಢಶಾಲೆ ಕಟ್ಟಡ ನಿರ್ಮಾಣವಾಗಿಲ್ಲ. ಕೂಡಲೇ ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎನ್ನುತ್ತಾರೆ.<br /> <br /> <strong>ಹಲವು ವೈಶಿಷ್ಟ್ಯಗಳ ಆಗರ</strong><br /> ಗ್ರಾಮದಲ್ಲಿ ವಾಸವಿರುವ 111ವರ್ಷದ ಕಾಳಮ್ಮ ಇಲ್ಲಿನ ಜನರ ಪಾಲಿಗೆ ಕಾಳಜ್ಜಿ. 80ಹರೆಯದ ಮಗನ ಜತೆ ವಾಸವಿರುವ ಈ ಅಜ್ಜಿ ದಿನ ಬೆಳಗಾದರೆ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಗುಡಿಸಲು ಸೇರುತ್ತಾಳೆ. ಈಕೆ ಗ್ರಾಮದ ಹಿರಿಯ ಜೀವ.<br /> <br /> ಯುವಕರಾದ ಕೆ. ರಮೇಶ್, ದೇವರಾಜ್, ಹರೀಶ್, ಪ್ರವೀಣ್ಕುಮಾರ್ ಯೋಧರಾಗಿ ದೇಶ ಸೇವೆಯಲ್ಲಿ ತೊಡಗಿದ್ದರೆ, ಯಲ್ಲಮ್ಮ, ಉಲಗಜ್ಜಿ, ಲಕ್ಷ್ಮಮ್ಮ ಸೋಬಾನೆ ಪದಗಳನ್ನು ಹಾಡುವಲ್ಲಿ ಪ್ರಾವೀಣ್ಯ ಪಡೆದಿದ್ದಾರೆ.<br /> <br /> ಇಲ್ಲಿ ಗಣಿಗಾರಿಕೆ ಸದ್ದು ಸಹ ನಡೆದಿದೆ. 1975-76ರ ಭಾಗದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಅದಿರುಮಿಶ್ರಿತ ಮಣ್ಣು ಇರುವುದನ್ನು ಪತ್ತೆ ಮಾಡಿದ್ದಾರೆ. ಇತ್ತೀಚಿನ ದಿನದಲ್ಲಿ ನೆಲ ಸಮತಟ್ಟು ಮಾಡುವ ಸಲುವಾಗಿ ಅವುಗಳ ಸಾಗಣೆ ನಡೆದಿದೆ.<br /> <br /> ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ರಂಗನಾಥಸ್ವಾಮಿ ದೇವಾಲಯ ಪಕ್ಕದಲ್ಲಿ ನಿಂತಿರುವ ಸಣ್ಣ ಗುಡ್ಡ ಅದಿರು ಅಂಶವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡುವ ಹಾಗೆ ತಲೆ ಎತ್ತಿ ನಿಂತಿದೆ.<br /> <br /> <strong>ಐತಿಹ್ಯದ ಕುರುಹು</strong><br /> ಇಲ್ಲಿನ ಕೆಲವರ ಜಮೀನು, ತೋಟದಲ್ಲಿ ಇತಿಹಾಸ ಸಾರುವ ಕೆಲವು ಕಲ್ಲುಗಳು ಸಿಕ್ಕಿದ್ದು, ಅದರ ಮೇಲಿರುವ ಗೆರೆ ಗಾತ್ರದ ಚಿತ್ರಗಳು ಶಿವಲಿಂಗ, ಈಶ್ವರ ಆಕೃತಿ ಸೃಷ್ಟಿಸಿಕೊಂಡಿವೆ.<br /> <br /> ಈಶ್ವರ ದೇವಾಲಯ ಪಕ್ಕದ ಮರದ ಬುಡದಲ್ಲಿ ಹಿಂದಿನ ಕಾಲದ ಶಿಲೆಗಳು ಇದ್ದು ಅವುಗಳನ್ನು ಸಹ ಇಲ್ಲಿನ ಜನರು ಭಕ್ತಿ ಭಾವದಿಂದ ಪೂಜೆ ಮಾಡುತ್ತಾ ಬಂದಿದ್ದಾರೆ.<br /> <br /> ಗ್ರಾಮದಲ್ಲಿ ನೆಲೆಯೂರಿದ್ದ ಶಿಲ್ಪಿಗಳು ನಿರ್ಮಿಸಿದ ಹಿರೇಕೆರೆ, ಗಿರಿಯಣ್ಣನ ಕೆರೆ, ಒಡ್ಡಿನ ಕೆರೆ, ಬಿಳನೀರು ಕಟ್ಟೆ ಕೆರೆಗಳು ಜನ, ಜಾನವಾರುಗಳ ಪಾಲಿಗೆ ನೀರು ಒದಗಿಸುವಲ್ಲಿ ಸಹಕಾರಿಯಾಗಿವೆ.<br /> <br /> <strong>ಸಾವಯವ ಕೃಷಿ</strong><br /> ಗ್ರಾಮದ ವೇದಮೂರ್ತಿ, ಜಯಣ್ಣ ಎರೇಹುಳು ಗೊಬ್ಬರ ಹಾಗೂ ಜೈವಿಕ ಗೊಬ್ಬರ ತಯಾರಿಸುವಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಸಾವಯವ ಕೃಷಿಗೂ ಸಹ ಒತ್ತು ನೀಡುವ ಯತ್ನ ನಡೆಸಿದ್ದಾರೆ.<br /> <br /> ಇವರು ತಯಾರಿಸಿದ ಗೊಬ್ಬರವನ್ನು ಮಾರಾಟ ಮಾಡಿ ಒಂದಿಷ್ಟು ಸಂಪಾದನೆ ಮೂಲವನ್ನು ಕಂಡುಕೊಂಡಿರುವ ಇವರು ಇದರಿಂದ ಒಂದಿಷ್ಟು ಸಾಧನೆ ಮಾಡಿದ್ದೇವೆ ಎಂಬ ಸಂತೃಪ್ತಿ ವ್ಯಕ್ತ ಮಾಡುತ್ತಾರೆ.<br /> <br /> ಒಟ್ಟಿನಲ್ಲಿ ಮೂರು ಬಾರಿ ಊರು ಬದಲಾದರೂ ಸಹ ಕೆಚ್ಚದೆಯಿಂದ ತಮ್ಮ ಐತಿಹ್ಯವನ್ನು ಒಡಲಲ್ಲಿ ಇಟ್ಟುಕೊಂಡು ಬದುಕು ನಡೆಸಿರುವ `ದೇವರನರಸೀಪುರ~ ಗ್ರಾಮ ಮಾದರಿ ಗ್ರಾಮಗಳ ಹಾದಿಯಲ್ಲಿ ಬೆಳೆಯುತ್ತಾ ಸಾಗಿದೆ. <br /> <br /> ಇದನ್ನು ಮುನ್ನಡೆಸುವ ನಿಟ್ಟಿನಲ್ಲಿ ಸರ್ಕಾರ ಒಂದಿಷ್ಟು ಕಾರ್ಯಯೋಜನೆ ರೂಪಿಸಿದರೆ ಪ್ರೇಕ್ಷಣೀಯ ಸ್ಥಳಗಳ ಸಾಲಿನಲ್ಲಿ ಇದನ್ನು ಬೆಳೆಸಬಹುದು ಎಂಬುದು ಮಾತ್ರ ಸತ್ಯ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶತಮಾನಗಳ ಇತಿಹಾಸ ಹೊತ್ತಿರುವ ಗ್ರಾಮ ಮೂರು ಬಾರಿ ಬದಲಾಗಿದ್ದರೂ ತನ್ನ ಹೆಸರಿನ ಮಹಿಮೆ ಮಾತ್ರದಿಂದಲೇ ಬೆಳೆದಿರುವ ಭದ್ರಾವತಿ ತಾಲ್ಲೂಕು `ದೇವ ನರಸೀಪುರ~ ವಿಶಿಷ್ಟ ಐತಿಹ್ಯ ತೆರೆದಿಡುತ್ತದೆ.<br /> ನಗರದಿಂದ ಸುಮಾರು ಐದು ಕಿ.ಮೀ. ತರೀಕೆರೆ ರಸ್ತೆಯಲ್ಲಿನ ಒಳದಾರಿಯಲ್ಲಿ ಹಾದು ಹೋದರೆ ಸಿಗುವ `ದೇವರನರಸೀಪುರ~ ಅಂತರಗಂಗೆ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ.<br /> <br /> <strong>ಹೆಸರಿನ ಜತೆಗಿನ ಇತಿಹಾಸ</strong><br /> ಭದ್ರಾವತಿ ಹಳೇನಗರ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದ ಜನರು ಈ ಗ್ರಾಮದಲ್ಲಿ ನೆಲೆಸಿ ಕೆರೆ, ಕಟ್ಟೆ, ದೇವಾಲಯವನ್ನು ಇಲ್ಲಿ ನಿರ್ಮಿಸಿಕೊಂಡು ಬದುಕು ನಡೆಸಿದ್ದರು. ಹೀಗಾಗಿ, ಊರಿಗೆ `ದೇವರು~ ನಿರ್ಮಿಸಿದ ಮಂದಿ ವಾಸವಿದ್ದ ಕಾರಣ ಅದರೊಂದಿಗೆ `ನರಸೀಪುರ~ ಸೇರ್ಪಡೆಯಾಯಿತು ಎನ್ನುತ್ತಾರೆ ಗ್ರಾಮದ ಹಿರಿಯ ಟಿ. ದಾಸಪ್ಪ.<br /> <br /> ಮೂರು ಬಾರಿ ಬದಲಾವಣೆ ಕಂಡಿರುವ ಊರು ಈಗಲೂ ಹಲವು ಮಹತ್ವ ವಿಷಯವನ್ನು ತನ್ನ ಒಡಲಲ್ಲಿ ಹೊತ್ತಿದೆ. ಹಿಂದೆ ನಾವು ಚಿಕ್ಕವರಿದ್ದಾಗ ಬಾಳ್ವೆ, ಬದುಕು ನಡೆಸಿದ ಊರು ಈಗ ಸಮೃದ್ಧ ತೋಟ, ಜಮೀನು ಆಗಿದೆ ಎನ್ನುತ್ತಾರೆ ಗುರುಸಿದ್ದಪ್ಪ.<br /> <br /> <strong>ಊರು ಬೆಳೆದ ಪರಿ</strong><br /> ಒಂದು ಬಾರಿ ರೋಗ-ರುಜಿನಗಳ ಕಾಟ ಹೆಚ್ಚಾದ ಕಾರಣ, ಮತ್ತೊಂದು ಬಾರಿ ಭದ್ರಾ ನಾಲೆ ತಿರುವು ಪಡೆದು ಹಾದು ಹೋದ ಸಂದರ್ಭದಲ್ಲಿ ಗ್ರಾಮದ ಸ್ಥಳಾಂತರ ನಡೆಯಿತು. <br /> <br /> ದೊಡ್ಡಮನೆ ಹನುಮಣ್ಣ, ಪಟೇಲ್ ಚಂದಪ್ಪ, ಚಿಕ್ಕಪ್ಪರ ನಂಜುಂಡಪ್ಪ, ವೀರಭದ್ರಪ್ಪ ಹೀಗೆ ಹತ್ತು ಹಲವು ಮಂದಿಯ ಕುಟುಂಬದಿಂದ ಬೆಳೆದ ಊರಿಗೆ ಮೂಲ ನೆಲೆ ನೀಡಿದವರು ಲಿಂಗಾಯತರು, ಭೋವಿಗಳು ಹಾಗೂ ಇನ್ನಿತರ ಸಣ್ಣ ಪುಟ್ಟ ಸಮುದಾಯ ಜನರು.<br /> <br /> ಕಾರ್ಖಾನೆ, ಜಮೀನು ಸಾಗುವಳಿ ಪ್ರಮಾಣ ಹೆಚ್ಚಾದಂತೆ ಒಕ್ಕಲಿಗರು, ಕುರುಬರು, ಲಂಬಾಣಿ... ಹೀಗೆ ಹತ್ತು ಹಲವು ಸಮುದಾಯ ಮಂದಿ ಸೇರಿ ಬೆಳೆಸಿದ ಊರಿನಲ್ಲಿ ಈಗ ಬರೋಬರಿ 1,000 ಮನೆಯಿದ್ದು, ನರಸೀಪುರ ಕ್ಯಾಂಪ್ ಎಂಬ ಸಣ್ಣ ಊರು ಸಹ ನೆಲೆ ನಿಂತಿದೆ.<br /> <br /> <strong>ಎಡಗೈ ಆಶೀರ್ವಾದದ ರಂಗನಾಥಸ್ವಾಮಿ</strong><br /> ಮುಜರಾಯಿ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ರಂಗನಾಥ ಸ್ವಾಮಿ ದೇವಾಲಯ ಗ್ರಾಮದ ಮುಖ್ಯ ದೇವಾಲಯದಲ್ಲಿ ಒಂದಾಗಿದೆ. ಇದು ಸೇರಿದಂತೆ ಈಶ್ವರ ದೇವಾಲಯ, ಅಂತಗಘಟ್ಟಮ್ಮ, ಹುಚ್ಚುರಾಯಸ್ವಾಮಿ, ಕರಿಯಮ್ಮ, ದಾನವಾಸ್ತಮ್ಮ, ಕೃಷ್ಣ, ಎಲ್ಲಮ್ಮ ದೇವಾಲಯಗಳು ಗ್ರಾಮದಲ್ಲಿ ನೆಲೆಯೂರಿವೆ.<br /> <br /> ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ನಿರ್ಮಿಸಲು ಬಂದ ಶಿಲ್ಪಿಗಳು ದೇವರ ಪೂಜೆಗಾಗಿ ಪ್ರತಿಷ್ಠಾಪಿಸಿದ್ದ ರಂಗನಾಥಸ್ವಾಮಿ. ಇದು ಮೊದಲು ಊರ ಹೊರಗೆ ನೆಲೆ ನಿಂತಿತ್ತು. ಕಾಲಾನಂತರ ಊರು ಬದಲಾದಂತೆ ಈಗ ಊರಿನ ಮುಖ್ಯಭಾಗದಲ್ಲಿ ಇದನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಲಾಗಿದೆ.<br /> <br /> ಈ ದೇವರ ವೈಶಿಷ್ಟ್ಯ ಎಡಗೈಯಲ್ಲಿ ಆಶೀರ್ವಾದ ಮಾಡುತ್ತಿರುವುದು, ಬಲಗೈ ಭೂಮಿ ಕಡೆಗೆ ಇಳೆ ಬಿಟ್ಟಿರುವುದು. ಇದನ್ನು ಅಭಿವೃದ್ಧಿ ಮಾಡುವಲ್ಲಿ ವೀರಭದ್ರಪ್ಪ ಅವರ ಶ್ರಮವಿದೆ ಎಂಬುದು ಜನರ ಅಭಿಪ್ರಾಯ.<br /> <br /> ಇಲ್ಲಿ ದಸರಾ ಸಂದರ್ಭದಲ್ಲಿ ಅದ್ದೂರಿ ಜಾತ್ರೆ ನಡೆಯಲಿದೆ. ದೇವಾಲಯ ಮುಂಭಾಗದಲ್ಲಿ `ಅಂಬು~ ಒಡೆಯುವ ಕಾರ್ಯಕ್ರಮ ಸಹ ನಡೆಯಲಿದ್ದು, ಸುತ್ತಲೂರಿನ ಸಹಸ್ರಾರು ಮಂದಿ ಭಾಗವಹಿಸುತ್ತಾರೆ ಎನ್ನುತ್ತಾರೆ ಅಪ್ಪಾಜಿ. <br /> <br /> <strong> ಶಾಲೆಯ ಭಾಗ್ಯ</strong><br /> ಈ ಗ್ರಾಮಕ್ಕೆ 1960ರಲ್ಲಿ ಪ್ರಾಥಮಿಕ ಶಾಲೆ ಭಾಗ್ಯ ದೊರೆಯಿತು. 1962ರಲ್ಲಿ ಕಟ್ಟಡ ನಿರ್ಮಿಸಲಾಯಿತು. ತದನಂತರ ವರ್ಷದಲ್ಲಿ ಮಾಧ್ಯಮಿಕ ಶಾಲೆ ತೀರಾ ಇತ್ತೀಚೆಗೆ ಪ್ರೌಢಶಾಲೆ ಆರಂಭವಾಗಿದೆ.<br /> <br /> ಶಾಲಾ ಕಟ್ಟಡ ಹಾಳಾಗಿದ್ದು ಅದಕ್ಕೆ ಹೊಸತನ ತುಂಬುವ ಕೆಲಸ ನಡೆಯಬೇಕಿದೆ ಎನ್ನುತ್ತಾರೆ ಗ್ರಾಮದ ಯುವಕ ಕುಮಾರ್. ಪ್ರೌಢಶಾಲೆ ಕಟ್ಟಡ ನಿರ್ಮಾಣವಾಗಿಲ್ಲ. ಕೂಡಲೇ ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎನ್ನುತ್ತಾರೆ.<br /> <br /> <strong>ಹಲವು ವೈಶಿಷ್ಟ್ಯಗಳ ಆಗರ</strong><br /> ಗ್ರಾಮದಲ್ಲಿ ವಾಸವಿರುವ 111ವರ್ಷದ ಕಾಳಮ್ಮ ಇಲ್ಲಿನ ಜನರ ಪಾಲಿಗೆ ಕಾಳಜ್ಜಿ. 80ಹರೆಯದ ಮಗನ ಜತೆ ವಾಸವಿರುವ ಈ ಅಜ್ಜಿ ದಿನ ಬೆಳಗಾದರೆ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಗುಡಿಸಲು ಸೇರುತ್ತಾಳೆ. ಈಕೆ ಗ್ರಾಮದ ಹಿರಿಯ ಜೀವ.<br /> <br /> ಯುವಕರಾದ ಕೆ. ರಮೇಶ್, ದೇವರಾಜ್, ಹರೀಶ್, ಪ್ರವೀಣ್ಕುಮಾರ್ ಯೋಧರಾಗಿ ದೇಶ ಸೇವೆಯಲ್ಲಿ ತೊಡಗಿದ್ದರೆ, ಯಲ್ಲಮ್ಮ, ಉಲಗಜ್ಜಿ, ಲಕ್ಷ್ಮಮ್ಮ ಸೋಬಾನೆ ಪದಗಳನ್ನು ಹಾಡುವಲ್ಲಿ ಪ್ರಾವೀಣ್ಯ ಪಡೆದಿದ್ದಾರೆ.<br /> <br /> ಇಲ್ಲಿ ಗಣಿಗಾರಿಕೆ ಸದ್ದು ಸಹ ನಡೆದಿದೆ. 1975-76ರ ಭಾಗದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಅದಿರುಮಿಶ್ರಿತ ಮಣ್ಣು ಇರುವುದನ್ನು ಪತ್ತೆ ಮಾಡಿದ್ದಾರೆ. ಇತ್ತೀಚಿನ ದಿನದಲ್ಲಿ ನೆಲ ಸಮತಟ್ಟು ಮಾಡುವ ಸಲುವಾಗಿ ಅವುಗಳ ಸಾಗಣೆ ನಡೆದಿದೆ.<br /> <br /> ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ರಂಗನಾಥಸ್ವಾಮಿ ದೇವಾಲಯ ಪಕ್ಕದಲ್ಲಿ ನಿಂತಿರುವ ಸಣ್ಣ ಗುಡ್ಡ ಅದಿರು ಅಂಶವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡುವ ಹಾಗೆ ತಲೆ ಎತ್ತಿ ನಿಂತಿದೆ.<br /> <br /> <strong>ಐತಿಹ್ಯದ ಕುರುಹು</strong><br /> ಇಲ್ಲಿನ ಕೆಲವರ ಜಮೀನು, ತೋಟದಲ್ಲಿ ಇತಿಹಾಸ ಸಾರುವ ಕೆಲವು ಕಲ್ಲುಗಳು ಸಿಕ್ಕಿದ್ದು, ಅದರ ಮೇಲಿರುವ ಗೆರೆ ಗಾತ್ರದ ಚಿತ್ರಗಳು ಶಿವಲಿಂಗ, ಈಶ್ವರ ಆಕೃತಿ ಸೃಷ್ಟಿಸಿಕೊಂಡಿವೆ.<br /> <br /> ಈಶ್ವರ ದೇವಾಲಯ ಪಕ್ಕದ ಮರದ ಬುಡದಲ್ಲಿ ಹಿಂದಿನ ಕಾಲದ ಶಿಲೆಗಳು ಇದ್ದು ಅವುಗಳನ್ನು ಸಹ ಇಲ್ಲಿನ ಜನರು ಭಕ್ತಿ ಭಾವದಿಂದ ಪೂಜೆ ಮಾಡುತ್ತಾ ಬಂದಿದ್ದಾರೆ.<br /> <br /> ಗ್ರಾಮದಲ್ಲಿ ನೆಲೆಯೂರಿದ್ದ ಶಿಲ್ಪಿಗಳು ನಿರ್ಮಿಸಿದ ಹಿರೇಕೆರೆ, ಗಿರಿಯಣ್ಣನ ಕೆರೆ, ಒಡ್ಡಿನ ಕೆರೆ, ಬಿಳನೀರು ಕಟ್ಟೆ ಕೆರೆಗಳು ಜನ, ಜಾನವಾರುಗಳ ಪಾಲಿಗೆ ನೀರು ಒದಗಿಸುವಲ್ಲಿ ಸಹಕಾರಿಯಾಗಿವೆ.<br /> <br /> <strong>ಸಾವಯವ ಕೃಷಿ</strong><br /> ಗ್ರಾಮದ ವೇದಮೂರ್ತಿ, ಜಯಣ್ಣ ಎರೇಹುಳು ಗೊಬ್ಬರ ಹಾಗೂ ಜೈವಿಕ ಗೊಬ್ಬರ ತಯಾರಿಸುವಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಸಾವಯವ ಕೃಷಿಗೂ ಸಹ ಒತ್ತು ನೀಡುವ ಯತ್ನ ನಡೆಸಿದ್ದಾರೆ.<br /> <br /> ಇವರು ತಯಾರಿಸಿದ ಗೊಬ್ಬರವನ್ನು ಮಾರಾಟ ಮಾಡಿ ಒಂದಿಷ್ಟು ಸಂಪಾದನೆ ಮೂಲವನ್ನು ಕಂಡುಕೊಂಡಿರುವ ಇವರು ಇದರಿಂದ ಒಂದಿಷ್ಟು ಸಾಧನೆ ಮಾಡಿದ್ದೇವೆ ಎಂಬ ಸಂತೃಪ್ತಿ ವ್ಯಕ್ತ ಮಾಡುತ್ತಾರೆ.<br /> <br /> ಒಟ್ಟಿನಲ್ಲಿ ಮೂರು ಬಾರಿ ಊರು ಬದಲಾದರೂ ಸಹ ಕೆಚ್ಚದೆಯಿಂದ ತಮ್ಮ ಐತಿಹ್ಯವನ್ನು ಒಡಲಲ್ಲಿ ಇಟ್ಟುಕೊಂಡು ಬದುಕು ನಡೆಸಿರುವ `ದೇವರನರಸೀಪುರ~ ಗ್ರಾಮ ಮಾದರಿ ಗ್ರಾಮಗಳ ಹಾದಿಯಲ್ಲಿ ಬೆಳೆಯುತ್ತಾ ಸಾಗಿದೆ. <br /> <br /> ಇದನ್ನು ಮುನ್ನಡೆಸುವ ನಿಟ್ಟಿನಲ್ಲಿ ಸರ್ಕಾರ ಒಂದಿಷ್ಟು ಕಾರ್ಯಯೋಜನೆ ರೂಪಿಸಿದರೆ ಪ್ರೇಕ್ಷಣೀಯ ಸ್ಥಳಗಳ ಸಾಲಿನಲ್ಲಿ ಇದನ್ನು ಬೆಳೆಸಬಹುದು ಎಂಬುದು ಮಾತ್ರ ಸತ್ಯ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>