ಹನುಮಂತನಹಳ್ಳಿ ಗ್ರಾಮದ ಜಯಣ್ಣ ಅವರಿಗೆ ಸೇರಿದ ಕುರಿಗಳಾಗಿದ್ದು ಎಂದಿನಂತೆ ಕುರಿಗಳನ್ನು ಮೇಯಿಸಲು ಗ್ರಾಮದ ಹೊರವಲಯದ ಜಮೀನಿಗೆ ತೆರಳಿದ್ದರು. ಸಣ್ಣದಾಗಿ ಮಳೆ ಆರಂಭವಾದ ತಕ್ಷಣ ಕುರಿಗಳು ಜಮೀನಿನ ಹುಣಸೆ ಮರದ ಕೆಳಗೆ ಹೋದಾಗ ಸಿಡಿಲು ಬಡಿದಿದೆ. ಮಂದೆಯಲ್ಲಿದ್ದ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಜಯಣ್ಣ ಛತ್ರಿ ಹಿಡಿದು ಬೇರೊಂದು ಹುಣಿಸೆಮರದ ಕೆಳಗೆ ಆಶ್ರಯ ಪಡೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.