ಕಾಮಗಾರಿ ಅನುಷ್ಠಾನಕ್ಕೆ ಚಾಲನೆ ನೀಡಿದ ನಂತರ ಮಾಧುಸ್ವಾಮಿ ಮಾತನಾಡಿ, ‘ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಈಗ ರಾಜ್ಯದ ಇತರೆ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಮಳೆ ನೀರು ಸಂಗ್ರಹ, ಮಳೆ ನೀರು ವ್ಯರ್ಥವಾಗದೆ ಕೆರೆಗಳ ಕಡೆಗೆ ಹರಿದು ಹೋಗುವಂತೆ ಮಾಡುವುದು, ಹಿಂಗು ಗುಂಡಿಗಳ ನಿರ್ಮಾಣ, ನೀರಿನ ಆವಿಯನ್ನು ತಡೆಯುವ ಸಲುವಾಗಿಅರಣೀಕರಣ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ’ ಎಂದು ವಿವರಿಸಿದರು.