<p><strong>ಹಾಗಲವಾಡಿ: </strong>ರೈತನ ಆತ್ಮಹತ್ಯೆ ಅಲ್ಲ ಇದು ಸರ್ಕಾರದಿಂದಾದ ಕೊಲೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ಹೇಳಿದರು. ಹೊಸಕೆರೆಯಲ್ಲಿ ನಡೆದ ರೈತ ಪರಶಿವಮೂರ್ತಿ ಆತ್ಮಹತ್ಯೆ ಪ್ರಕರಣ ಸಂಬಂಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.</p>.<p>ರೈತರ ಸಾಲಕ್ಕೆ ನೋಟಿಸ್ ನೀಡುವುದಾಗಲಿ, ಮನೆ ಬಾಗಿಲಿಗೆ ಹೋಗಿ ಒತ್ತಾಯ ಮಾಡುವುದಾಗಲಿ ಮಾಡವಂತಿಲ್ಲ. ಆದರೂ ವ್ಯವಸ್ಥಾಪಕ ರೈತರ ಮನೆಗೆ ಹೋಗಿ ರೈತರನ್ನು ಪೀಡಿಸಿ ಸಾವಿಗೆ ಕಾರಣವಾಗಿದ್ದಾರೆ. ಇಂತಹ ವ್ಯವಸ್ಥಾಪಕನನ್ನು ಕೆಲಸದಿಂದ ಅಮಾನತು ಮಾಡಿ ಎಂದು ಒತ್ತಾಯಿಸಿದರು.</p>.<p>ಸಿಕೆಜಿಬಿ ಅಧಿಕಾರಿ ಗೋಪಾಲ ಹೆಗಡೆ ಮಾತನಾಡಿ, ಬ್ಯಾಂಕ್ ವ್ಯವಸ್ಥಾಪಕನ ವರ್ಗಾವಣೆ ಹಾಗೂ ಪರಿಹಾರ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡುವ ಭರವಸೆ ನೀಡಿದರು.</p>.<p>ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿದರು. ಮುಷ್ಕರದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಿಜಾನಂದಮೂರ್ತಿ, ಲೋಕೇಶ್, ಮಂಜುನಾಥ, ಗುರುಚನ್ನಬಸಪ್ಪ, ಚಿಕ್ಕ ಸಿದ್ದರಾಮಯ್ಯ, ಶಂಕರಲಿಂಗೇಗೌಡ, ಯತೀಶ್, ರವೀಶ್, ಕಾಳೇಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಗಲವಾಡಿ: </strong>ರೈತನ ಆತ್ಮಹತ್ಯೆ ಅಲ್ಲ ಇದು ಸರ್ಕಾರದಿಂದಾದ ಕೊಲೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ಹೇಳಿದರು. ಹೊಸಕೆರೆಯಲ್ಲಿ ನಡೆದ ರೈತ ಪರಶಿವಮೂರ್ತಿ ಆತ್ಮಹತ್ಯೆ ಪ್ರಕರಣ ಸಂಬಂಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.</p>.<p>ರೈತರ ಸಾಲಕ್ಕೆ ನೋಟಿಸ್ ನೀಡುವುದಾಗಲಿ, ಮನೆ ಬಾಗಿಲಿಗೆ ಹೋಗಿ ಒತ್ತಾಯ ಮಾಡುವುದಾಗಲಿ ಮಾಡವಂತಿಲ್ಲ. ಆದರೂ ವ್ಯವಸ್ಥಾಪಕ ರೈತರ ಮನೆಗೆ ಹೋಗಿ ರೈತರನ್ನು ಪೀಡಿಸಿ ಸಾವಿಗೆ ಕಾರಣವಾಗಿದ್ದಾರೆ. ಇಂತಹ ವ್ಯವಸ್ಥಾಪಕನನ್ನು ಕೆಲಸದಿಂದ ಅಮಾನತು ಮಾಡಿ ಎಂದು ಒತ್ತಾಯಿಸಿದರು.</p>.<p>ಸಿಕೆಜಿಬಿ ಅಧಿಕಾರಿ ಗೋಪಾಲ ಹೆಗಡೆ ಮಾತನಾಡಿ, ಬ್ಯಾಂಕ್ ವ್ಯವಸ್ಥಾಪಕನ ವರ್ಗಾವಣೆ ಹಾಗೂ ಪರಿಹಾರ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡುವ ಭರವಸೆ ನೀಡಿದರು.</p>.<p>ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿದರು. ಮುಷ್ಕರದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಿಜಾನಂದಮೂರ್ತಿ, ಲೋಕೇಶ್, ಮಂಜುನಾಥ, ಗುರುಚನ್ನಬಸಪ್ಪ, ಚಿಕ್ಕ ಸಿದ್ದರಾಮಯ್ಯ, ಶಂಕರಲಿಂಗೇಗೌಡ, ಯತೀಶ್, ರವೀಶ್, ಕಾಳೇಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>