ಬಹುದಿನದ ಬೇಡಿಕೆಯಾಗಿದ್ದ ಇಂದಿರಾ ಕ್ಯಾಂಟೀನ್ ಪಟ್ಟಣಕ್ಕೆ ಮಂಜೂರಾದ ದಿನಗಳಲ್ಲಿ ಜನರು ಖುಷಿ ಪಟ್ಟಿದ್ದರು. ಇನ್ನೇನು ಡಾ.ರಾಜ್ಕುಮಾರ್ ರಸ್ತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಕ್ಕದಲ್ಲಿ ಜಾಗ ಗುರುತಿಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಪಡೆದ ವ್ಯಕ್ತಿ ಭೂಮಿಯನ್ನು ಸಮತಟ್ಟು ಮಾಡುವಾಗ ನೀರು ಹರಿದು ಬರುವ ಜಾಗ ಎಂಬುದನ್ನು ಪರಿಗಣಿಸದೆ ಕಟ್ಟಡ ನಿರ್ಮಿಸಿದ್ದಾರೆ. ಅಡಿಪಾಯವನ್ನು ಎತ್ತರ ಮಾಡದೆ ತಗ್ಗು ಪ್ರದೇಶವನ್ನು ಸಮಗೊಳಿಸಿ ಸಿಮೆಂಟ್ ಕಾಂಕ್ರೀಟ್ ಹಾಕಿ ಬೇರೆ ಕಡೆಯಿಂದ ಕಟ್ಟಡ ನಿರ್ಮಾಣದ ಗೋಡೆಗಳನ್ನು ತಂದು ಕಟ್ಟಡಕ್ಕೆ ಜೋಡಿಸಿದ್ದಾರೆ. ನೀರು ಹರಿಯುವ ಚರಂಡಿ ಪಕ್ಕದಲ್ಲಿ ಅಡಿಪಾಯ ಎತ್ತರ ಮಾಡದೆ ನಿರ್ಮಿಸಿದ್ದಾರೆ.