<p><strong>ತುಮಕೂರು</strong>: ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ ಎಂದು ಲೇಖಕಿ ರಂಗಮ್ಮ ಹೊದೇಕಲ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಭಾನುವಾರ ಅಂಗಳ ಕಮ್ಯುನಿಟಿ ಟ್ರಸ್ಟ್, ದಾರಿ ಬುತ್ತಿ ಬಳಗದಿಂದ ಹಮ್ಮಿಕೊಂಡಿದ್ದ ಧನಪಾಲ್ ನಾಗರಾಜಪ್ಪ ಅವರ ‘ಮಾತಾಡುವ ದೇವರು’ ಮತ್ತು ‘ಅವಳಿಗೆ ಹೇಳಿ’ ಕೃತಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ದುಃಖಗಳಿಂದ ಮಾತ್ರ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ನೋವಿಗೆ ಮಿಡಿಯಲು, ನಮ್ಮೊಳಗಿನ ಸೃಜನಶೀಲತೆ ಉದ್ದೀಪಿಸಲು ಸಾಧ್ಯ. ಈ ಕೃತಿಯಲ್ಲಿಯೂ ದುಃಖವಿದೆ, ಗಾಯಗಳಿವೆ. ಅದರೆ, ಇವು ಕೇವಲ ಗಾಯಗಳಲ್ಲ, ನಮಗೆ ಜೀವನದ ಪಾಠಗಳನ್ನು ಹೇಳುವ ಅನುಭವಗಳು ಎಂದರು.</p>.<p>ಶಿಕ್ಷಕಿ ಕೆ.ವಿ.ವಿವೇಕ, ‘ಮಾತಾಡುವ ದೇವರು’ ಕೃತಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ, ಮಾನವೀಯ ಮೌಲ್ಯಗಳನ್ನು ಹೊಂದಿಸಿ ಅನುವಾದಿಸಲಾಗಿದೆ. ನಮ್ಮದೇ ಬದುಕಿನ ಕಥೆ ಎಂಬಂತೆ ಮೂಡಿ ಬಂದಿದೆ. ಇದು ಓದುಗರಲ್ಲಿ ವಿಚಾರ ಮಂಥನ ಉಂಟು ಮಾಡುತ್ತದೆ’ ಎಂದು ವಿಶ್ಲೇಷಿಸಿದರು.</p>.<p>ದಾರಿ ಬುತ್ತಿ ಹಾಗೂ ಅಂಗಳ ಟ್ರಸ್ಟ್ನ ಎಸ್.ಕಲಾಧರ್, ಧನಪಾಲ್ ನಾಗರಾಜಪ್ಪ, ಸಿ.ಎಸ್.ಮೇಘನಾ, ಎಸ್.ಆರ್.ದರ್ಶನ್, ಬಿ.ಕೆ.ದಾದಾಪೀರ್, ಅನೀಸ, ರಜಿನಿ, ಎಂ.ಎನ್.ರಂಜಿತ, ಎ.ಪಿ.ಮಾನಸ, ಪಿ.ಆರ್.ನವೀನ್ ಕುಮಾರ್, ಧನುಷ್ ಎಚ್.ಶೇಖರ್, ಡಿ.ಪಿ.ಪಾತಲಿಂಗಯ್ಯ, ಕೆ.ಎಸ್.ಹರಿಕೃಷ್ಣ, ಟಿ.ಮಾರುತಿ, ಕೆ.ಜ್ಞಾನೇಶ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ ಎಂದು ಲೇಖಕಿ ರಂಗಮ್ಮ ಹೊದೇಕಲ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಭಾನುವಾರ ಅಂಗಳ ಕಮ್ಯುನಿಟಿ ಟ್ರಸ್ಟ್, ದಾರಿ ಬುತ್ತಿ ಬಳಗದಿಂದ ಹಮ್ಮಿಕೊಂಡಿದ್ದ ಧನಪಾಲ್ ನಾಗರಾಜಪ್ಪ ಅವರ ‘ಮಾತಾಡುವ ದೇವರು’ ಮತ್ತು ‘ಅವಳಿಗೆ ಹೇಳಿ’ ಕೃತಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ದುಃಖಗಳಿಂದ ಮಾತ್ರ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ನೋವಿಗೆ ಮಿಡಿಯಲು, ನಮ್ಮೊಳಗಿನ ಸೃಜನಶೀಲತೆ ಉದ್ದೀಪಿಸಲು ಸಾಧ್ಯ. ಈ ಕೃತಿಯಲ್ಲಿಯೂ ದುಃಖವಿದೆ, ಗಾಯಗಳಿವೆ. ಅದರೆ, ಇವು ಕೇವಲ ಗಾಯಗಳಲ್ಲ, ನಮಗೆ ಜೀವನದ ಪಾಠಗಳನ್ನು ಹೇಳುವ ಅನುಭವಗಳು ಎಂದರು.</p>.<p>ಶಿಕ್ಷಕಿ ಕೆ.ವಿ.ವಿವೇಕ, ‘ಮಾತಾಡುವ ದೇವರು’ ಕೃತಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ, ಮಾನವೀಯ ಮೌಲ್ಯಗಳನ್ನು ಹೊಂದಿಸಿ ಅನುವಾದಿಸಲಾಗಿದೆ. ನಮ್ಮದೇ ಬದುಕಿನ ಕಥೆ ಎಂಬಂತೆ ಮೂಡಿ ಬಂದಿದೆ. ಇದು ಓದುಗರಲ್ಲಿ ವಿಚಾರ ಮಂಥನ ಉಂಟು ಮಾಡುತ್ತದೆ’ ಎಂದು ವಿಶ್ಲೇಷಿಸಿದರು.</p>.<p>ದಾರಿ ಬುತ್ತಿ ಹಾಗೂ ಅಂಗಳ ಟ್ರಸ್ಟ್ನ ಎಸ್.ಕಲಾಧರ್, ಧನಪಾಲ್ ನಾಗರಾಜಪ್ಪ, ಸಿ.ಎಸ್.ಮೇಘನಾ, ಎಸ್.ಆರ್.ದರ್ಶನ್, ಬಿ.ಕೆ.ದಾದಾಪೀರ್, ಅನೀಸ, ರಜಿನಿ, ಎಂ.ಎನ್.ರಂಜಿತ, ಎ.ಪಿ.ಮಾನಸ, ಪಿ.ಆರ್.ನವೀನ್ ಕುಮಾರ್, ಧನುಷ್ ಎಚ್.ಶೇಖರ್, ಡಿ.ಪಿ.ಪಾತಲಿಂಗಯ್ಯ, ಕೆ.ಎಸ್.ಹರಿಕೃಷ್ಣ, ಟಿ.ಮಾರುತಿ, ಕೆ.ಜ್ಞಾನೇಶ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>