ಕಾರಿನಲ್ಲಿ ಶ್ರೀನಿವಾಸ್ ಇರಲಿಲ್ಲ. ಅವರ ಮೊಮ್ಮಗನನ್ನು ಕಾರಿನಲ್ಲಿ ಚಾಲಕ ಶಾಲೆಯಿಂದ ಕರೆದುಕೊಂಡು ಬರುತ್ತಿದ್ದರು. ಕೋತಿತೋಪು ಕಡೆಯಿಂದ ಬಂದ ಕಾರು ಎಸ್.ಎಸ್.ವೃತ್ತದ ಬಳಿಯ ಸಿಗ್ನಲ್ನಲ್ಲಿ ಒಮಿನಿ ವಾಹನಕ್ಕೆ ಡಿಕ್ಕಿ ಹೊಡೆದು, ಮುಂದೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದೆ. ಒಮಿನಿ ವಾಹನ ಮುಂದೆ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಕಾರು, ಒಮಿನಿ ವಾಹನ ನಜ್ಜುಗುಜ್ಜಾಗಿವೆ. ಶ್ರೀನಿವಾಸ್ ಮೊಮ್ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.