ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ನಿವಾಸಿಯಾಗಿರುವ ಶೇಖರ ನಡುವಿನಕೇರಿ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತರಾಗಿದ್ದಾರೆ. ಘಟನೆಯಲ್ಲಿ ಹೆಸ್ಕಾಂನ ಮಹಾಲಿಂಗಪುರ ಶಾಖಾಧಿಕಾರಿ ರಾಜಕುಮಾರ ಸರಿಕಾರ, ಕಿರಿಯ ಅಭಿಯಂತರ ರಮೇಶ ಚಲವಾದಿ ಹಾಗೂ ಲೈನ್ಮನ್ ಮಹಾಂತೇಶ ಪೂಜಾರಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.