<p>ತುಮಕೂರು: ಅಕ್ಷಯ ತೃತೀಯ ಪ್ರಯುಕ್ತ ಚಿನ್ನ, ಬೆಳ್ಳಿ ಆಭರಣಗಳ ಖರೀದಿಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದ್ದು, ಕೆಲವರು ಈಗಾಗಲೇ ಮುಂಗಡ ಕಾಯ್ದಿರಿಸಿದ್ದಾರೆ.</p>.<p>ಸಾಮಾನ್ಯವಾಗಿ ಮಂಗಳವಾರ ಲಕ್ಷ್ಮಿಯನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವುದು ಕಡಿಮೆ. ಇನ್ನೂ ಯಾರಾದರೂ ಹಣ ಕೊಟ್ಟರಷ್ಟೇ ಪಡೆದುಕೊಳ್ಳುತ್ತಾರೆ. ಸಾಮಾನ್ಯ ಜನರು ಅಲ್ಪಸ್ವಲ್ಪ ಇಂತಹ ನಂಬಿಕೆ ಇಟ್ಟುಕೊಂಡಿದ್ದರೆ, ವ್ಯವಹಾರಸ್ಥರು ಮಾತ್ರ ಸಾಕಷ್ಟು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ.</p>.<p>ಆದರೆ, ಈ ಬಾರಿ ಮಂಗಳವಾರವೇ ಅಕ್ಷಯತೃತೀಯ ಬಂದಿದ್ದು, ಇದೂ ಸಹ ಶುಭ ದಿನವಾಗಿದೆ. ಮಂಗಳವಾರ ಎನ್ನುವುದಕ್ಕಿಂತ ಶುಭ ದಿನವಾಗಿದೆ ಎಂದುಕೊಂಡೇ ಜನರು ಚಿನ್ನ ಖರೀದಿಸಲಿದ್ದಾರೆ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಾರೆ.</p>.<p>ಈ ದಿನ ಬಂಗಾರ ಖರೀದಿ ಮಾಡಿ ದವರ ಮನೆ ಸಮೃದ್ಧವಾಗಿ ಬೆಳೆಯು ತ್ತದೆ. ಅವರ ಆರ್ಥಿಕ ಸಂಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಸಾರ್ವಜನಿಕರಲ್ಲಿ ಬೇರೂರಿದೆ. ಹಾಗಾಗಿ, ಎಲ್ಲಾ ಕಡೆ ವ್ಯಾಪಾರ ಜೋರಾಗಿಯೇ ನಡೆಯುತ್ತದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಚಿನ್ನದ ದರ ಹೆಚ್ಚಳವಾಗಿದ್ದರೂ ಮಳಿಗೆಗೆ ಭೇಟಿ ನೀಡಿ ಆಭರಣ ಖರೀದಿಸಲು ಮುಂದಾಗಿದ್ದಾರೆ.</p>.<p>ನಿರಂತರವಾಗಿ ಏರುತ್ತಲೇ ಬಂದಿದ್ದ ಚಿನ್ನದ ಬೆಲೆ ಕೆಲವು ದಿನಗಳಿಂದ ಕಡಿಮೆಯಾಗುತ್ತಿದ್ದು, ಬಂಗಾರ ಖರೀದಿಯತ್ತ ಜನರನ್ನು ಸೆಳೆಯುತ್ತಿದೆ. ಮಹಿಳೆಯರು ಚಿನ್ನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೊಸದಾಗಿ ಮದುವೆಯಾದವರು, ಮದುವೆಗೆ ಸಿದ್ಧತೆ ಮಾಡಿಕೊಳ್ಳುವವರು ಅಕ್ಷಯ ತೃತೀಯ ದಿನದಂದೇ ಆಭರಣ ಖರೀದಿಗೆ ಮುಂದಾಗುತ್ತಾರೆ.</p>.<p>ಮಳಿಗೆಗಳಲ್ಲಿ ಗ್ರಾಹಕರಿಗೆ ಇಷ್ಟವಾಗುವ ಆಭರಣಗಳನ್ನು ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ನಿಂದ ಕಳೆದ ಎರಡು ವರ್ಷಗಳಿಂದ ವ್ಯಾಪಾರ ವಹಿವಾಟು ಕುಸಿದಿತ್ತು. ಕೋವಿಡ್ ಲಾಕ್ಡೌನ್ ಕಾಲದಲ್ಲಿ ಮಳಿಗೆ ಮುಚ್ಚಿದ್ದರು. ಮದುವೆ, ಹಬ್ಬಗಳ ಸಮಯದಲ್ಲೂ ವ್ಯಾಪಾರ ಮಂಕಾಗಿತ್ತು. ಈ ವರ್ಷ ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಅಕ್ಷಯ ತೃತೀಯ ಬರಮಾಡಿಕೊಳ್ಳುತ್ತಿದ್ದು, ಮಾಲೀಕರು ಸಾಕಷ್ಟು ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.</p>.<p>ನಗರದಲ್ಲಿ ಒಂದು ಗ್ರಾಂ ಚಿನ್ನದದರ ₹4,720 (24 ಕ್ಯಾರೇಟ್), ಬೆಳ್ಳಿ ಕೆ.ಜಿ ₹65 ಸಾವಿರ ಇದೆ. ಈ ದಿನ ಚಿನ್ನ, ಬೆಳ್ಳಿ ಆಭರಣಗಳ ಜೊತೆಗೆ ವಾಹನ, ಆಸ್ತಿ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯ ಪ್ರಯುಕ್ತ ಮನೆಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುತ್ತಾರೆ.</p>.<p>ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ. ಹಾಗಾಗಿ ನಮ್ಮ ಕೈಲಾದಷ್ಟು ಬಂಗಾರ ಖರೀದಿಸುತ್ತೇವೆ. ಶುಭಗಳಿಗೆಯಲ್ಲಿ ಆಭರಣ ಖರೀದಿಸುವುದರಿಂದ ನಮ್ಮಲ್ಲಿ ಯಾವುದೇ ಕೌಟುಂಬಿಕ ಕಲಹಗಳು ಹಾಗೂ ಇತರೆ ಸಮಸ್ಯೆಗಳು ಬರುವುದಿಲ್ಲ ಎಂಬ ನಂಬಿಕೆಯಿದೆ ಎಂದು ನಗರ ನಿವಾಸಿ ನಳಿನಾ ಹೇಳಿದರು.</p>.<p>ರಂಜಾನ್, ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಸೇರಿದಂತೆ ಮೂರು ಹಬ್ಬಗಳು ಒಂದೇ ದಿನ ಬಂದಿವೆ. ಇದರಿಂದ ಅಕ್ಷಯ ತೃತೀಯದ ಮೆರುಗು ಹೆಚ್ಚಿಸಿದೆ ಎಂದು ವರ್ತಕರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಅಕ್ಷಯ ತೃತೀಯ ಪ್ರಯುಕ್ತ ಚಿನ್ನ, ಬೆಳ್ಳಿ ಆಭರಣಗಳ ಖರೀದಿಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದ್ದು, ಕೆಲವರು ಈಗಾಗಲೇ ಮುಂಗಡ ಕಾಯ್ದಿರಿಸಿದ್ದಾರೆ.</p>.<p>ಸಾಮಾನ್ಯವಾಗಿ ಮಂಗಳವಾರ ಲಕ್ಷ್ಮಿಯನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವುದು ಕಡಿಮೆ. ಇನ್ನೂ ಯಾರಾದರೂ ಹಣ ಕೊಟ್ಟರಷ್ಟೇ ಪಡೆದುಕೊಳ್ಳುತ್ತಾರೆ. ಸಾಮಾನ್ಯ ಜನರು ಅಲ್ಪಸ್ವಲ್ಪ ಇಂತಹ ನಂಬಿಕೆ ಇಟ್ಟುಕೊಂಡಿದ್ದರೆ, ವ್ಯವಹಾರಸ್ಥರು ಮಾತ್ರ ಸಾಕಷ್ಟು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ.</p>.<p>ಆದರೆ, ಈ ಬಾರಿ ಮಂಗಳವಾರವೇ ಅಕ್ಷಯತೃತೀಯ ಬಂದಿದ್ದು, ಇದೂ ಸಹ ಶುಭ ದಿನವಾಗಿದೆ. ಮಂಗಳವಾರ ಎನ್ನುವುದಕ್ಕಿಂತ ಶುಭ ದಿನವಾಗಿದೆ ಎಂದುಕೊಂಡೇ ಜನರು ಚಿನ್ನ ಖರೀದಿಸಲಿದ್ದಾರೆ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಾರೆ.</p>.<p>ಈ ದಿನ ಬಂಗಾರ ಖರೀದಿ ಮಾಡಿ ದವರ ಮನೆ ಸಮೃದ್ಧವಾಗಿ ಬೆಳೆಯು ತ್ತದೆ. ಅವರ ಆರ್ಥಿಕ ಸಂಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಸಾರ್ವಜನಿಕರಲ್ಲಿ ಬೇರೂರಿದೆ. ಹಾಗಾಗಿ, ಎಲ್ಲಾ ಕಡೆ ವ್ಯಾಪಾರ ಜೋರಾಗಿಯೇ ನಡೆಯುತ್ತದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಚಿನ್ನದ ದರ ಹೆಚ್ಚಳವಾಗಿದ್ದರೂ ಮಳಿಗೆಗೆ ಭೇಟಿ ನೀಡಿ ಆಭರಣ ಖರೀದಿಸಲು ಮುಂದಾಗಿದ್ದಾರೆ.</p>.<p>ನಿರಂತರವಾಗಿ ಏರುತ್ತಲೇ ಬಂದಿದ್ದ ಚಿನ್ನದ ಬೆಲೆ ಕೆಲವು ದಿನಗಳಿಂದ ಕಡಿಮೆಯಾಗುತ್ತಿದ್ದು, ಬಂಗಾರ ಖರೀದಿಯತ್ತ ಜನರನ್ನು ಸೆಳೆಯುತ್ತಿದೆ. ಮಹಿಳೆಯರು ಚಿನ್ನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೊಸದಾಗಿ ಮದುವೆಯಾದವರು, ಮದುವೆಗೆ ಸಿದ್ಧತೆ ಮಾಡಿಕೊಳ್ಳುವವರು ಅಕ್ಷಯ ತೃತೀಯ ದಿನದಂದೇ ಆಭರಣ ಖರೀದಿಗೆ ಮುಂದಾಗುತ್ತಾರೆ.</p>.<p>ಮಳಿಗೆಗಳಲ್ಲಿ ಗ್ರಾಹಕರಿಗೆ ಇಷ್ಟವಾಗುವ ಆಭರಣಗಳನ್ನು ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ನಿಂದ ಕಳೆದ ಎರಡು ವರ್ಷಗಳಿಂದ ವ್ಯಾಪಾರ ವಹಿವಾಟು ಕುಸಿದಿತ್ತು. ಕೋವಿಡ್ ಲಾಕ್ಡೌನ್ ಕಾಲದಲ್ಲಿ ಮಳಿಗೆ ಮುಚ್ಚಿದ್ದರು. ಮದುವೆ, ಹಬ್ಬಗಳ ಸಮಯದಲ್ಲೂ ವ್ಯಾಪಾರ ಮಂಕಾಗಿತ್ತು. ಈ ವರ್ಷ ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಅಕ್ಷಯ ತೃತೀಯ ಬರಮಾಡಿಕೊಳ್ಳುತ್ತಿದ್ದು, ಮಾಲೀಕರು ಸಾಕಷ್ಟು ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.</p>.<p>ನಗರದಲ್ಲಿ ಒಂದು ಗ್ರಾಂ ಚಿನ್ನದದರ ₹4,720 (24 ಕ್ಯಾರೇಟ್), ಬೆಳ್ಳಿ ಕೆ.ಜಿ ₹65 ಸಾವಿರ ಇದೆ. ಈ ದಿನ ಚಿನ್ನ, ಬೆಳ್ಳಿ ಆಭರಣಗಳ ಜೊತೆಗೆ ವಾಹನ, ಆಸ್ತಿ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯ ಪ್ರಯುಕ್ತ ಮನೆಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುತ್ತಾರೆ.</p>.<p>ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ. ಹಾಗಾಗಿ ನಮ್ಮ ಕೈಲಾದಷ್ಟು ಬಂಗಾರ ಖರೀದಿಸುತ್ತೇವೆ. ಶುಭಗಳಿಗೆಯಲ್ಲಿ ಆಭರಣ ಖರೀದಿಸುವುದರಿಂದ ನಮ್ಮಲ್ಲಿ ಯಾವುದೇ ಕೌಟುಂಬಿಕ ಕಲಹಗಳು ಹಾಗೂ ಇತರೆ ಸಮಸ್ಯೆಗಳು ಬರುವುದಿಲ್ಲ ಎಂಬ ನಂಬಿಕೆಯಿದೆ ಎಂದು ನಗರ ನಿವಾಸಿ ನಳಿನಾ ಹೇಳಿದರು.</p>.<p>ರಂಜಾನ್, ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಸೇರಿದಂತೆ ಮೂರು ಹಬ್ಬಗಳು ಒಂದೇ ದಿನ ಬಂದಿವೆ. ಇದರಿಂದ ಅಕ್ಷಯ ತೃತೀಯದ ಮೆರುಗು ಹೆಚ್ಚಿಸಿದೆ ಎಂದು ವರ್ತಕರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>