ಕಾಮಗಾರಿ ತರಾತುರಿ ಹಾಗೂ ಕಳಪೆಯಿಂದ ಮಾಡಿರುವುದು ಧೃಢವಾಗಿದೆ. ಗುತ್ತಿಗೆದಾರ ಟೆಂಡರ್ ಬಳಿಕ ಇಲಾಖೆ ಗಮನಕ್ಕೆ ತರದೆ ಏಕಾಏಕಿ ಕಾಮಗಾರಿ ತರಾತುರಿಯಲ್ಲಿ ಮಾಡಿ ಮುಗಿಸಿದ್ದಾರೆ. ಇದು ಕಳಪೆಯಿಂದ ಕೂಡಿರುವ ಕಾರಣ ಪೈಪ್ಲೈನ್ ತೆಗೆದು ಮತ್ತೆ ಗುಣಮಟ್ಟದ ಪೈಪ್ ಅಳವಡಿಸುವಂತೆ ನೋಟಿಸ್ ನೀಡಲಾಗಿದೆ. ಇದಕ್ಕೆ ಸ್ಪಂದಿಸದಿದ್ದರೆ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.