‘ಭವನದ ಮೇಲ್ಭಾಗವಂತೂ ಕಳಪೆ ಕಾಮಗಾರಿಯಿಂದ ಕಿತ್ತುಹೋಗಿದೆ. ಭವನದ ಮೂಲೆ ಮೂಲೆಗಳಲ್ಲಿ ಬಿದ್ದಿರುವ ಕಸದ ರಾಶಿ, ಜೂಜಾಟದ ಎಲೆಗಳು, ಮದ್ಯದ ಬಾಟಲಿಗಳು ರಸ್ತೆಯಲ್ಲಿ ಓಡಾಡುವ ಜನರಿಗೆ ಅಸಹ್ಯ ತರಿಸುತ್ತವೆ. ಮಹಾನುಭಾವರ ಹೆಸರಿನಲ್ಲಿ ಭವನಗಳು ನಿರ್ಮಾಣವಾಗುವಾಗ ಇರುವ ಖುಷಿ, ಅದರ ಬಿಲ್ ಮಾಡಿಕೊಂಡ ಮೇಲೆ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಅದರ ಬಗ್ಗೆ ಗಮನವೇ ಹರಿಸುವುದಿಲ್ಲ’ ಎಂದು ಸಾರ್ವಜನಿಕರೊಬ್ಬರು ದೂರುತ್ತಾರೆ.