<p><strong>ತುಮಕೂರು</strong>: ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಅಂಬೇಡ್ಕರ್ ಯುವಕರ ಸಂಘದಿಂದ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಂ ಜಯಂತಿಯನ್ನು ಅರಿಳೀಮರದಪಾಳ್ಯ, ಮಾರಿಯಮ್ಮ ನಗರದಲ್ಲಿ ಆಯೋಜಿಸಲಾಗಿತ್ತು.</p>.<p>ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಚಿಂತಕ ಕೆ.ದೊರೈರಾಜ್, ‘ಯುಗಾದಿ ಹಬ್ಬದ ಸಮಯದಲ್ಲಿ ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ಮಾಂಸ ಮಾರಾಟದ ಮೇಲೆ ನಿಷೇಧ ಹೇರಿ ಬಹುಜನರ ಆಹಾರ ಸಂಸ್ಕೃತಿ ನಿಯಂತ್ರಿಸಲಾಗುತ್ತಿದೆ. ಇಂತಹ ಬಲಪಂಥೀಯ ಸಿದ್ಧಾಂತಗಳನ್ನುಅರ್ಥೈಸಿಕೊಂಡು ಯುವಜನರಿಗೆಮನದಟ್ಟು ಮಾಡಿಸಬೇಕು’ ಎಂದು ಸಲಹೆ ಮಾಡಿದರು.</p>.<p>ವಿಶ್ವದಲ್ಲಿ ಎಲ್ಲಾ ರಾಷ್ಟ್ರಗಳು ಅಂಬೇಡ್ಕರ್ ಜಯಂತಿಯನ್ನು ಜ್ಞಾನದ ದಿನವನ್ನಾಗಿ ಆಚರಿಸುತ್ತಿವೆ. ಕಳೆದ 20 ವರ್ಷಗಳ ಹಿಂದೆ ಜಯಂತಿ ಆಚರಿಸುವವರಿಗೆ ಅಡಚಣೆ ಮಾಡುವಂತಹ ವಾತಾವರಣ ಇತ್ತು. ಆದರೆ ಈಗ ಜನರೇ ಸ್ವಯಂ ಪ್ರೇರಿತರಾಗಿ ಅಂಬೇಡ್ಕರ್ ಹಬ್ಬ ಆಚರಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ನೆನಪಿಸಿಕೊಂಡರು.</p>.<p>ಕೆಲವೊಂದು ಹಿತಾಸಕ್ತಿಗಳು ಅಂಬೇಡ್ಕರ್ ಜಯಂತಿಯನ್ನು ವೈಭವೀಕರಿಸುವ ವ್ಯವಸ್ಥೆ ಸೃಷ್ಟಿಸಿ ನಾವು ಮೈಮರೆಯುವಂತೆ ಮಾಡುತ್ತಿವೆ. ಈ ಬಗ್ಗೆ ಎಚ್ಚರವಾಗಿರಬೇಕು. ಭಾರತದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಒಗ್ಗೂಡುವ ಸ್ಥಿತಿ ಇಲ್ಲವಾಗಿದೆ. ಧರ್ಮ, ಜಾತಿ, ಲಿಂಗ, ಆರ್ಥಿಕ ಅಸಮಾನತೆಗಳು ಸೃಷ್ಟಿಯಾಗಿ ಸೌಹಾರ್ದ ವಾತಾವರಣ ಹದಗೆಟ್ಟಿದೆ. ಈ ಹಿಂದಿನ ಸಾಮಾಜಿಕ ಸ್ಥಿತಿಗತಿಗೆ ಕೊಂಡೊಯ್ಯುವಂತಹ ಆಡಳಿತ ನಮ್ಮ ದೇಶದಲ್ಲಿದೆ ಎಂದು ಎಚ್ಚರಿಸಿದರು.</p>.<p>ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ‘ಮುಂದಿನ ದಿನಗಳಲ್ಲಿ ಮಾನವ ಸಮಾಜ ನಿರ್ಮಾಣಕ್ಕೆ ಈ ದಿನವನ್ನು ಕೇಂದ್ರವಾಗಿ ಇಟ್ಟುಕೊಳ್ಳಬೇಕು’ ಎಂದರು.</p>.<p>ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು, ರಾಜ್ಯ ಕನಕ ಪತ್ತಿನ ಸಹಕಾರ ಸಂಘದ ಪುಟ್ಟರಾಜು, ಮುಖಂಡರಾದ ಜಿ.ಎಸ್.ಸಿದ್ದರಾಮಯ್ಯ, ಕೃಷ್ಣಮೂರ್ತಿ, ರಂಗನಾಥ್, ಅರುಣ್, ಶಂಕರಯ್ಯ, ರಂಗನಾಥ್, ಕಿರಣ್, ರಂಗನಾಥ್, ಕಣ್ಣನ್, ಕೃಷ್ಣ, ಮುರುಗನ್, ಚಕ್ರಪಾಣಿ, ಮಾದವನ್, ಕಾಶಿ, ಗೋವಿಂದಸ್ವಾಮಿ, ಮನುಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಅಂಬೇಡ್ಕರ್ ಯುವಕರ ಸಂಘದಿಂದ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಂ ಜಯಂತಿಯನ್ನು ಅರಿಳೀಮರದಪಾಳ್ಯ, ಮಾರಿಯಮ್ಮ ನಗರದಲ್ಲಿ ಆಯೋಜಿಸಲಾಗಿತ್ತು.</p>.<p>ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಚಿಂತಕ ಕೆ.ದೊರೈರಾಜ್, ‘ಯುಗಾದಿ ಹಬ್ಬದ ಸಮಯದಲ್ಲಿ ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ಮಾಂಸ ಮಾರಾಟದ ಮೇಲೆ ನಿಷೇಧ ಹೇರಿ ಬಹುಜನರ ಆಹಾರ ಸಂಸ್ಕೃತಿ ನಿಯಂತ್ರಿಸಲಾಗುತ್ತಿದೆ. ಇಂತಹ ಬಲಪಂಥೀಯ ಸಿದ್ಧಾಂತಗಳನ್ನುಅರ್ಥೈಸಿಕೊಂಡು ಯುವಜನರಿಗೆಮನದಟ್ಟು ಮಾಡಿಸಬೇಕು’ ಎಂದು ಸಲಹೆ ಮಾಡಿದರು.</p>.<p>ವಿಶ್ವದಲ್ಲಿ ಎಲ್ಲಾ ರಾಷ್ಟ್ರಗಳು ಅಂಬೇಡ್ಕರ್ ಜಯಂತಿಯನ್ನು ಜ್ಞಾನದ ದಿನವನ್ನಾಗಿ ಆಚರಿಸುತ್ತಿವೆ. ಕಳೆದ 20 ವರ್ಷಗಳ ಹಿಂದೆ ಜಯಂತಿ ಆಚರಿಸುವವರಿಗೆ ಅಡಚಣೆ ಮಾಡುವಂತಹ ವಾತಾವರಣ ಇತ್ತು. ಆದರೆ ಈಗ ಜನರೇ ಸ್ವಯಂ ಪ್ರೇರಿತರಾಗಿ ಅಂಬೇಡ್ಕರ್ ಹಬ್ಬ ಆಚರಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ನೆನಪಿಸಿಕೊಂಡರು.</p>.<p>ಕೆಲವೊಂದು ಹಿತಾಸಕ್ತಿಗಳು ಅಂಬೇಡ್ಕರ್ ಜಯಂತಿಯನ್ನು ವೈಭವೀಕರಿಸುವ ವ್ಯವಸ್ಥೆ ಸೃಷ್ಟಿಸಿ ನಾವು ಮೈಮರೆಯುವಂತೆ ಮಾಡುತ್ತಿವೆ. ಈ ಬಗ್ಗೆ ಎಚ್ಚರವಾಗಿರಬೇಕು. ಭಾರತದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಒಗ್ಗೂಡುವ ಸ್ಥಿತಿ ಇಲ್ಲವಾಗಿದೆ. ಧರ್ಮ, ಜಾತಿ, ಲಿಂಗ, ಆರ್ಥಿಕ ಅಸಮಾನತೆಗಳು ಸೃಷ್ಟಿಯಾಗಿ ಸೌಹಾರ್ದ ವಾತಾವರಣ ಹದಗೆಟ್ಟಿದೆ. ಈ ಹಿಂದಿನ ಸಾಮಾಜಿಕ ಸ್ಥಿತಿಗತಿಗೆ ಕೊಂಡೊಯ್ಯುವಂತಹ ಆಡಳಿತ ನಮ್ಮ ದೇಶದಲ್ಲಿದೆ ಎಂದು ಎಚ್ಚರಿಸಿದರು.</p>.<p>ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ‘ಮುಂದಿನ ದಿನಗಳಲ್ಲಿ ಮಾನವ ಸಮಾಜ ನಿರ್ಮಾಣಕ್ಕೆ ಈ ದಿನವನ್ನು ಕೇಂದ್ರವಾಗಿ ಇಟ್ಟುಕೊಳ್ಳಬೇಕು’ ಎಂದರು.</p>.<p>ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು, ರಾಜ್ಯ ಕನಕ ಪತ್ತಿನ ಸಹಕಾರ ಸಂಘದ ಪುಟ್ಟರಾಜು, ಮುಖಂಡರಾದ ಜಿ.ಎಸ್.ಸಿದ್ದರಾಮಯ್ಯ, ಕೃಷ್ಣಮೂರ್ತಿ, ರಂಗನಾಥ್, ಅರುಣ್, ಶಂಕರಯ್ಯ, ರಂಗನಾಥ್, ಕಿರಣ್, ರಂಗನಾಥ್, ಕಣ್ಣನ್, ಕೃಷ್ಣ, ಮುರುಗನ್, ಚಕ್ರಪಾಣಿ, ಮಾದವನ್, ಕಾಶಿ, ಗೋವಿಂದಸ್ವಾಮಿ, ಮನುಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>