ಕುಣಿಗಲ್: ತುಮಕೂರಿನಲ್ಲಿ ಕಳುವಾಗಿದ್ದ ಬೈಕ್, ಕುಣಿಗಲ್ನಲ್ಲಿ ಪತ್ತೆಯಾಗಿದ್ದು, ಪೊಲೀಸರು ಮಾಲೀಕನನ್ನು ಪತ್ತೆ ಹಚ್ಚಿ ವಾಹನ ಮರಳಿಸಿದ್ದಾರೆ.
ಪಟ್ಟಣದ ರೈಲು ನಿಲ್ದಾಣದ ಮುಂಭಾಗ ಮೂರು ತಿಂಗಳಿಂದಲೂ ಹೊಂಡ ಬೈಕ್ ನಿಂತಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಾಹನ ವಶಕ್ಕೆ ಪಡೆದರು. ನಂತರ ವಾಹನದ ಸಂಖ್ಯೆ ಮೂಲಕ ಮಾಲೀಕನನ್ನು ಪತ್ತೆಹಚ್ಚಲಾಗಿದೆ.
ಸ್ವಾಂದೇನಹಳ್ಳಿಯ ಸೋಮಶೇಖರ್ ಅವರು ತುಮಕೂರು ಮಂಡಿಪೇಟೆ ಬಳಿ ಸೂರ್ಯ ಮೆಟಲ್ ಅಂಗಡಿ ಮುಂದೆ ನಿಲ್ಲಿಸಿದ್ದ ಹೊಂಡ ಬೈಕ್ ಅನ್ನು ಫೆ. 1ರಂದು ಕಳವು ಮಾಡಲಾಗಿತ್ತು. ಈ ಬಗ್ಗೆ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೋಮವಾರ ಸಂಜೆ ಬೈಕ್ ಅನ್ನು ಮಾಲೀಕನ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.