‘ಈ ಕಟ್ಟೆಯಲ್ಲಿ 2010ಕ್ಕಿಂತ ಮುಂಚೆ ಕಟ್ಟೆಯ ಅಂಗಳದ ತುಂಬಾ ಮಳೆ ನೀರು ಸಂಗ್ರಹವಾಗುತ್ತಿತ್ತು. ಗೆದ್ದಲಹಳ್ಳಿ, ಜಯನಗರ, ಸಪ್ತಗಿರಿ ಬಡಾವಣೆ ಪ್ರದೇಶಕ್ಕೆ ಹವಾನಿಯಂತ್ರಿಕದಂತೆ ಇತ್ತು. ಹಲವಾರು ಜೀವಿಗಳಿಗೂ ಈ ಕಟ್ಟೆ ನೆಚ್ಚಿನ ತಾಣವಾಗಿತ್ತು. ಭೂಗಳ್ಳರ ಕೆಂಗಣ್ಣಿಗೆ ಬಿದ್ದು ಕೆರೆ ನುಂಗುವ ಪ್ರಯತ್ನ ನಡೆಯಿತು. ನಗರದಲ್ಲಿನ ಘನತ್ಯಾಜ್ಯ ಸುರಿದು ಹಂತ ಹಂತವಾಗಿ ಪೂರ್ವ ಭಾಗವನ್ನು ಒತ್ತುವರಿ ಮಾಡಿ ಬಡಾವಣೆ ಮಾಡಿದ್ದಾರೆ’ ಎಂದು ಆಪಾದಿಸಿದ್ದಾರೆ.