ಮಧುಗಿರಿ : ದ್ವಿಚಕ್ರ ವಾಹನಕ್ಕೆಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದ್ದು ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಯುವತಿಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕು ಪುರವರ ಗ್ರಾಮದ ರಾಜಣ್ಣ ಎಂಬುವರ ಪುತ್ರಿ ಅರುಂಧತಿ (18) ಅಪಘಾತದಲ್ಲಿ ಮೃತಪಟ್ಟವರು. ಪಟ್ಟಣದ ಬೆಂಕಿಪುರದ ಕಿಶೋರ್ (22) ಗಾಯಗೊಂಡವರು.
ಕಿಶೋರ್ ಮತ್ತು ಅರುಂಧತಿ ದ್ವಿಚಕ್ರವಾಹನದಲ್ಲಿ ಮಧುಗಿರಿಯಿಂದ ತೆರಳುತ್ತಿದ್ದಾಗ, ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ದ್ವಿಚಕ್ರ ವಾಹನ ಸವಾರ ಕಿಶೋರ್ ಗೆ ಹೆಚ್ಚಿನ ಚಿಕಿತ್ಸೆ ಗೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.