ವಿಧಾನ ಮಂಡಲದ ಕಲಾಪಗಳನ್ನು ಚಿತ್ರೀಕರಿಸಲು ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಸಹ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದೆ. ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲರು ಕಲಾಪದ ವೇಳೆ ನೋಡುವ ವಿಡಿಯೋಗಳು, ಗೂಳಿಹಟ್ಟಿ ಶೇಖರ್ ಅಂತವರ ಹುಚ್ಚಾಟಗಳು ಜನಕ್ಕೆ ಗೊತ್ತಾಗಬಾರದು. ಅಯೋಗ್ಯರ ವರ್ತನೆಗಳು ಜನರಿಗೆ ಕಾಣಬಾರದೆಂದು ಇಂತಹ ಕ್ರಮ ವಹಿಸಲಾಗಿದೆ ಎಂದು ಕುಟುಕಿದರು.