<p><strong>ತುಮಕೂರು</strong>: ಇಡೀ ನಗರವೇ ಬಂದ್ ಆಗಿದೆ. ಕೂಲಿಕಾರರು, ನಿರ್ಗತಿಕರು ಅನ್ನದ ದಾರಿ ಹುಡುಕುತ್ತಿದ್ದಾರೆ. ಇಂತಹದ್ದರ ನಡುವೆಯೇ ನಗರದಲ್ಲಿ ಮಾನವೀಯ ಮುಖಗಳು ಸಹ ಕಾಣುತ್ತಿವೆ. ಅಶಕ್ತರಿಗೆ ಕೆಲವರು ಸ್ವಪ್ರೇರಣೆಯಿಂದ ಊಟ, ನೀರು ನೀಡಿ ನೆರವಾಗುತ್ತಿದ್ದಾರೆ.</p>.<p>ಮರಳೂರಿನ ಅರುಣ್ ಕುಮಾರ್ ಮತ್ತು ಮಂಜುನಾಥ್ ಅವರು ಊಟದ ಸೌಲಭ್ಯ ಒದಗಿಸುತ್ತಿದ್ದಾರೆ. ಅವರಿಗೆ ದಾನಿಗಳು ಸಹ ನೆರವಾಗಬಹುದು. ಅರುಣ್ ಕುಮಾರ್ ಅವರನ್ನು 9611503037 ಮೂಲಕ ಸಂಪರ್ಕಿಸಬಹುದು.</p>.<p>ಶಶಿಧರ್ ಎಂಬುವವರು ಪೊಲೀಸರು ಹಾಗೂ ನಾಗರಿಕರಿಗೆ ಕುಡಿಯುವ ನೀರು ಒದಗಿಸುತ್ತಿದ್ದಾರೆ. ಕೆಲಸದಲ್ಲಿ ತೊಡಗಿರುವ ಪೊಲೀಸರ ಬಳಿಗೆ ತೆರಳಿ ಹ್ಯಾಂಡ್ಸ್ಯಾನಿಟೈಸರ್ ಕೊಡುತ್ತಿದ್ದಾರೆ.</p>.<p>‘ಉಪ್ಪಾರಹಳ್ಳಿ, ಅಶೋಕ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಸ್ಯಾನಿಟೈಸರ್ ಮತ್ತು ನೀರು ಕೊಟ್ಟಿದ್ದೇನೆ’ ಎನ್ನುತ್ತಾರೆ ಶಶಿಧರ್.</p>.<p>ಪೃಥ್ವಿ ಆಂಬುಲೆನ್ಸ್ನ ಮೂರ್ತಿ ಹಾಗೂ ಅವರ ಸ್ನೇಹಿತರಾದ ಡಾ.ವೀರೇಶ್, ನಗರ ಸರ್ಕಾರಿ ಆಸ್ಪತ್ರೆ, ಖಾಸಗಿ ಬಸ್ ನಿಲ್ದಾಣ ಹೀಗೆ ವಿವಿಧ ಕಡೆಗಳಲ್ಲಿದ್ದ ನಿರ್ಗತಿಕರಿಗೆ ಆಹಾರ ಪೊಟ್ಟಣಗಳನ್ನು ನೀಡಿದರು.</p>.<p>‘ಗುರುವಾರ 100 ಆಹಾರ ಪ್ಯಾಕೇಟ್ಗಳನ್ನು ನೀಡಿದ್ದೇವೆ. ಎಲ್ಲಿಯಾದರೂ ಸಾರ್ವಜನಿಕರು ಹೀಗೆ ಅಸಹಾಯಕರು, ನಿರ್ಗತಿಕರಿಗೆ ಊಟ ಅವಶ್ಯವಾಗಿದ್ದರೆ ಮಾಹಿತಿ ನೀಡಬಹುದು’ ಎಂದು ಮೂರ್ತಿ ತಿಳಿಸಿದರು. ಅವರ ಸಂಪರ್ಕ ಸಂಖ್ಯೆ 9986824666.</p>.<p>ಮಹಾನಗರ ಪಾಲಿಕೆ ಆವರಣದಲ್ಲಿ ಡೇನಲ್ಮ್ ಯೋಜನೆಯಡಿ ನಿರ್ಮಿಸಿರುವ ವಸತಿ ನಿಲಯದಲ್ಲಿ 40ಕ್ಕೂ ಹೆಚ್ಚು ಭಿಕ್ಷುಕರಿಗೆ ಆಶ್ರಯ ಕಲ್ಪಿಸಲಾಗಿದೆ. ಆಯುಕ್ತ ಟಿ.ಭೂಬಾಲನ್ ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.</p>.<p>ನಗರದ ರಾಮಕೃಷ್ಣ ರಸ್ತೆಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಕ್ಯಾಂಪ್ನಲ್ಲಿ ನೆಲೆಸಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಮಿಕರಿಗೆ ಸೋಪ್ಗಳನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಇಡೀ ನಗರವೇ ಬಂದ್ ಆಗಿದೆ. ಕೂಲಿಕಾರರು, ನಿರ್ಗತಿಕರು ಅನ್ನದ ದಾರಿ ಹುಡುಕುತ್ತಿದ್ದಾರೆ. ಇಂತಹದ್ದರ ನಡುವೆಯೇ ನಗರದಲ್ಲಿ ಮಾನವೀಯ ಮುಖಗಳು ಸಹ ಕಾಣುತ್ತಿವೆ. ಅಶಕ್ತರಿಗೆ ಕೆಲವರು ಸ್ವಪ್ರೇರಣೆಯಿಂದ ಊಟ, ನೀರು ನೀಡಿ ನೆರವಾಗುತ್ತಿದ್ದಾರೆ.</p>.<p>ಮರಳೂರಿನ ಅರುಣ್ ಕುಮಾರ್ ಮತ್ತು ಮಂಜುನಾಥ್ ಅವರು ಊಟದ ಸೌಲಭ್ಯ ಒದಗಿಸುತ್ತಿದ್ದಾರೆ. ಅವರಿಗೆ ದಾನಿಗಳು ಸಹ ನೆರವಾಗಬಹುದು. ಅರುಣ್ ಕುಮಾರ್ ಅವರನ್ನು 9611503037 ಮೂಲಕ ಸಂಪರ್ಕಿಸಬಹುದು.</p>.<p>ಶಶಿಧರ್ ಎಂಬುವವರು ಪೊಲೀಸರು ಹಾಗೂ ನಾಗರಿಕರಿಗೆ ಕುಡಿಯುವ ನೀರು ಒದಗಿಸುತ್ತಿದ್ದಾರೆ. ಕೆಲಸದಲ್ಲಿ ತೊಡಗಿರುವ ಪೊಲೀಸರ ಬಳಿಗೆ ತೆರಳಿ ಹ್ಯಾಂಡ್ಸ್ಯಾನಿಟೈಸರ್ ಕೊಡುತ್ತಿದ್ದಾರೆ.</p>.<p>‘ಉಪ್ಪಾರಹಳ್ಳಿ, ಅಶೋಕ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಸ್ಯಾನಿಟೈಸರ್ ಮತ್ತು ನೀರು ಕೊಟ್ಟಿದ್ದೇನೆ’ ಎನ್ನುತ್ತಾರೆ ಶಶಿಧರ್.</p>.<p>ಪೃಥ್ವಿ ಆಂಬುಲೆನ್ಸ್ನ ಮೂರ್ತಿ ಹಾಗೂ ಅವರ ಸ್ನೇಹಿತರಾದ ಡಾ.ವೀರೇಶ್, ನಗರ ಸರ್ಕಾರಿ ಆಸ್ಪತ್ರೆ, ಖಾಸಗಿ ಬಸ್ ನಿಲ್ದಾಣ ಹೀಗೆ ವಿವಿಧ ಕಡೆಗಳಲ್ಲಿದ್ದ ನಿರ್ಗತಿಕರಿಗೆ ಆಹಾರ ಪೊಟ್ಟಣಗಳನ್ನು ನೀಡಿದರು.</p>.<p>‘ಗುರುವಾರ 100 ಆಹಾರ ಪ್ಯಾಕೇಟ್ಗಳನ್ನು ನೀಡಿದ್ದೇವೆ. ಎಲ್ಲಿಯಾದರೂ ಸಾರ್ವಜನಿಕರು ಹೀಗೆ ಅಸಹಾಯಕರು, ನಿರ್ಗತಿಕರಿಗೆ ಊಟ ಅವಶ್ಯವಾಗಿದ್ದರೆ ಮಾಹಿತಿ ನೀಡಬಹುದು’ ಎಂದು ಮೂರ್ತಿ ತಿಳಿಸಿದರು. ಅವರ ಸಂಪರ್ಕ ಸಂಖ್ಯೆ 9986824666.</p>.<p>ಮಹಾನಗರ ಪಾಲಿಕೆ ಆವರಣದಲ್ಲಿ ಡೇನಲ್ಮ್ ಯೋಜನೆಯಡಿ ನಿರ್ಮಿಸಿರುವ ವಸತಿ ನಿಲಯದಲ್ಲಿ 40ಕ್ಕೂ ಹೆಚ್ಚು ಭಿಕ್ಷುಕರಿಗೆ ಆಶ್ರಯ ಕಲ್ಪಿಸಲಾಗಿದೆ. ಆಯುಕ್ತ ಟಿ.ಭೂಬಾಲನ್ ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.</p>.<p>ನಗರದ ರಾಮಕೃಷ್ಣ ರಸ್ತೆಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಕ್ಯಾಂಪ್ನಲ್ಲಿ ನೆಲೆಸಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಮಿಕರಿಗೆ ಸೋಪ್ಗಳನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>