ಈ ಕುರಿತು ಶಿವಕುಮಾರಸ್ವಾಮಿ ಅವರ ಸೋದರ ಧನಂಜಯ, ‘ನಮ್ಮ ಅಣ್ಣನ ಮನೆಯ ನಾಯಿ ನಾಗರಾಜು ಮನೆಯ ಹತ್ತಿರ ಹೋಗಿದ್ದರಿಂದ ಜಗಳ ಶುರುವಾಯಿತು. ನಾಗರಾಜು ಮನೆಯವರು ನಾಯಿಗೆ ಹೊಡೆದದ್ದನ್ನು ನೋಡಿ ಶಿವಕುಮಾರಸ್ವಾಮಿ ಅವರ ಪತ್ನಿ ಪ್ರಶ್ನಿಸಿದರು. ಇದರಿಂದ ಈ ಜಗಳ ಹೆಚ್ಚಾಯಿತು. ನಂತರ ನಾಗರಾಜು ಅವರ ಮಗ ಅರುಣ್ ಅಲ್ಲೇ ಇದ್ದ ಕಬ್ಬಿಣದ ಪೈಪ್ನಿಂದ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ತಿಳಿಸಿದರು.