‘ಜಿಲ್ಲೆಯ ಎಲ್ಲ ಪಡಿತರ ಅಂಗಡಿಯವರು ಪಡಿತರ ಎತ್ತುವಳಿಯಾದ ಕೂಡಲೇ ವಿತರಣೆ ಪ್ರಾರಂಭಿಸಬೇಕು. ಸರ್ಕಾರ ನಿಗದಿಪಡಿಸಿರುವ ಪ್ರಮಾಣದಂತೆ ಪದಾರ್ಥಗಳನ್ನು ಏಪ್ರಿಲ್ ಅಂತ್ಯದವರೆಗೆ ವಿತರಿಸಬೇಕು. ಪಡಿತರ ಪದಾರ್ಥಗಳಲ್ಲದೆ ಬೇರೆ ಪದಾರ್ಥಗಳನ್ನು ಖರೀದಿಸುವಂತೆ ಗ್ರಾಹಕರನ್ನು ಒತ್ತಾಯಿಸಬಾರದು. ಹಣ ಪಡೆಯಬಾರದು ಎಂದು ಸೂಚಿಸಿದ್ದಾರೆ.