ಗ್ರಾಮದಲ್ಲಿ ಗಣೇಶನ ವಿಸರ್ಜನೆ ಸಮಯದಲ್ಲಿ ಟ್ರಾಕ್ಟರ್ನಲ್ಲಿ ಮೂರ್ತಿ ಮೆರವಣಿಗೆ ನಡೆಯುತಿತ್ತು. ಟ್ರಾಕ್ಟರ್ ರಸ್ತೆ ಬದಿಯ ದಿಬ್ಬ ಎರಿದ ವೇಳೆ ಗಣೇಶನ ಮೂರ್ತಿ ಮತ್ತು ಅಲಂಕೃತಗೊಂಡಿದ್ದ ಆರ್ಚ್ನ ಕಬ್ಬಿಣದ ಸಾಮಾಗ್ರಿ ವಾಲಿದವು. ಆಗ ವಿದ್ಯುತ್ ಪ್ರವಹಿಸಿದೆ. ಅವುಗಳು ಬೀಳದಂತೆ ಹಿಡಿಯಲು ಹೋದ ವಕೀಲ ಲೋಕೇಶ್ ಅವರಿಗೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.