ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ; ವಿದ್ಯುತ್ ಪ್ರವಹಿಸಿ ವಕೀಲ ಸಾವು

Last Updated 8 ಸೆಪ್ಟೆಂಬರ್ 2019, 20:32 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಕದರಪುರ ಗ್ರಾಮದಲ್ಲಿ ಭಾನುವಾರ ಸಂಜೆ ಗಣೇಶೋತ್ಸವದ ಸಮಯದಲ್ಲಿ ವಿದ್ಯುತ್ ಪ್ರವಹಿಸಿ ವಕೀಲರೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಗಣೇಶನ ವಿಸರ್ಜನೆ ಸಮಯದಲ್ಲಿ ಟ್ರಾಕ್ಟರ್‌ನಲ್ಲಿ ಮೂರ್ತಿ ಮೆರವಣಿಗೆ ನಡೆಯುತಿತ್ತು. ಟ್ರಾಕ್ಟರ್ ರಸ್ತೆ ಬದಿಯ ದಿಬ್ಬ ಎರಿದ ವೇಳೆ ಗಣೇಶನ ಮೂರ್ತಿ ಮತ್ತು ಅಲಂಕೃತಗೊಂಡಿದ್ದ ಆರ್ಚ್‌ನ ಕಬ್ಬಿಣದ ಸಾಮಾಗ್ರಿ ವಾಲಿದವು. ಆಗ ವಿದ್ಯುತ್‌ ಪ್ರವಹಿಸಿದೆ. ಅವುಗಳು ಬೀಳದಂತೆ ಹಿಡಿಯಲು ಹೋದ ವಕೀಲ ಲೋಕೇಶ್‌ ಅವರಿಗೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಟ್ರಾಕ್ಟರ್‌ನಿಂದ ಬಿದ್ದ ಲೋಕೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತಪಟ್ಟಿದ್ದಾರೆ. ಟ್ರಾಕ್ಟರ್‌ನಲ್ಲಿದ್ದವರು ಜಿಗಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT