<p><strong>ತುಮಕೂರು:</strong> ಕೊಲೆ ಬೆದರಿಕೆ ಹಾಕಿ, ₹40 ಸಾವಿರ ಹಣ ಕಿತ್ತುಕೊಂಡ ಆರೋಪದ ಮೇರೆಗೆ ನಗರದ ನವೀನ್, ಉದ್ಯಮಿ ಮಂಜುನಾಥ್ ರೆಡ್ಡಿ ಮತ್ತು ಇತರರ ವಿರುದ್ಧ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>'₹1.90 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕಿ ₹40 ಸಾವಿರ ಪಡೆದಿದ್ದಾರೆ' ಎಂದು ನಗರದ ಬನಶಂಕರಿ ನಿವಾಸಿ, 'ಧವಳ ಡೇರಿ ಗ್ರೂಪ್ಸ್' ಮಾಲೀಕ ಡಿ.ಮೇಘರಾಜು ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.</p>.<p>'ಮಂಜುನಾಥ ರೆಡ್ಡಿ ಅವರ ಎಪಿಎಂಸಿ ಮಾರುಕಟ್ಟೆಯ ಮಾರುತಿ ಎಂಟರ್ ಪ್ರೈಸಸ್ ಮಳಿಗೆಯಿಂದ ನಮ್ಮ ಅಂಗಡಿಗೆ ಅಮುಲ್ ತುಪ್ಪ, ಐಸ್ ಕ್ರೀಮ್ ಸೇರಿದಂತೆ ಇತರೆ ಪದಾರ್ಥ ಖರೀದಿಸಲಾಗಿತ್ತು. ಇದರಲ್ಲಿ ₹50 ಸಾವಿರ ಬೆಲೆ ಬಾಳುವ ಪದಾರ್ಥಗಳ ಬಳಕೆಯ ದಿನಾಂಕ ಮುಗಿಯುವ ಹಂತಕ್ಕೆ ತಲುಪಿತ್ತು. ಈ ಪದಾರ್ಥ ವಾಪಸ್ ಪಡೆಯುವುದಾಗಿ ಮಾರುತಿ ಎಂಟರ್ ಪ್ರೈಸಸ್ ಮಾಲೀಕರು ಖರೀದಿ ಸಮಯದಲ್ಲಿ ತಿಳಿಸಿದ್ದರು. ದಿನಾಂಕ ಮುಗಿದ ನಂತರ ಅವರಿಗೆ ತಿಳಿಸಿದರೆ ವಾಪಸ್ ತೆಗೆದುಕೊಂಡು ಹೋಗಲಿಲ್ಲ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ನಂತರ ಯಾವುದೇ ಪದಾರ್ಥ ವಾಪಸ್ ಪಡೆಯುವುದಿಲ್ಲ, ಎಲ್ಲ ಪದಾರ್ಥಗಳಿಗೆ ₹1.90 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು. ಹಣ ಕೊಡದಿದ್ದಾಗ ನನ್ನನ್ನು ಬಲವಂತವಾಗಿ ಎಪಿಎಂಸಿ ಯಾರ್ಡ್ಗೆ ಕರೆದುಕೊಂಡು ಹೋಗಿ ಗೋದಾಮಿನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ₹40 ಸಾವಿರ ಕಿತ್ತುಕೊಂಡು, ಇನ್ನೂ ₹1.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>'ಪೊಲೀಸರಿಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಆದ್ದರಿಂದ ತಡವಾಗಿ ಬಂದು ದೂರು ನೀಡಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಕೊಲೆ ಬೆದರಿಕೆ ಹಾಕಿ, ₹40 ಸಾವಿರ ಹಣ ಕಿತ್ತುಕೊಂಡ ಆರೋಪದ ಮೇರೆಗೆ ನಗರದ ನವೀನ್, ಉದ್ಯಮಿ ಮಂಜುನಾಥ್ ರೆಡ್ಡಿ ಮತ್ತು ಇತರರ ವಿರುದ್ಧ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>'₹1.90 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕಿ ₹40 ಸಾವಿರ ಪಡೆದಿದ್ದಾರೆ' ಎಂದು ನಗರದ ಬನಶಂಕರಿ ನಿವಾಸಿ, 'ಧವಳ ಡೇರಿ ಗ್ರೂಪ್ಸ್' ಮಾಲೀಕ ಡಿ.ಮೇಘರಾಜು ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.</p>.<p>'ಮಂಜುನಾಥ ರೆಡ್ಡಿ ಅವರ ಎಪಿಎಂಸಿ ಮಾರುಕಟ್ಟೆಯ ಮಾರುತಿ ಎಂಟರ್ ಪ್ರೈಸಸ್ ಮಳಿಗೆಯಿಂದ ನಮ್ಮ ಅಂಗಡಿಗೆ ಅಮುಲ್ ತುಪ್ಪ, ಐಸ್ ಕ್ರೀಮ್ ಸೇರಿದಂತೆ ಇತರೆ ಪದಾರ್ಥ ಖರೀದಿಸಲಾಗಿತ್ತು. ಇದರಲ್ಲಿ ₹50 ಸಾವಿರ ಬೆಲೆ ಬಾಳುವ ಪದಾರ್ಥಗಳ ಬಳಕೆಯ ದಿನಾಂಕ ಮುಗಿಯುವ ಹಂತಕ್ಕೆ ತಲುಪಿತ್ತು. ಈ ಪದಾರ್ಥ ವಾಪಸ್ ಪಡೆಯುವುದಾಗಿ ಮಾರುತಿ ಎಂಟರ್ ಪ್ರೈಸಸ್ ಮಾಲೀಕರು ಖರೀದಿ ಸಮಯದಲ್ಲಿ ತಿಳಿಸಿದ್ದರು. ದಿನಾಂಕ ಮುಗಿದ ನಂತರ ಅವರಿಗೆ ತಿಳಿಸಿದರೆ ವಾಪಸ್ ತೆಗೆದುಕೊಂಡು ಹೋಗಲಿಲ್ಲ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ನಂತರ ಯಾವುದೇ ಪದಾರ್ಥ ವಾಪಸ್ ಪಡೆಯುವುದಿಲ್ಲ, ಎಲ್ಲ ಪದಾರ್ಥಗಳಿಗೆ ₹1.90 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು. ಹಣ ಕೊಡದಿದ್ದಾಗ ನನ್ನನ್ನು ಬಲವಂತವಾಗಿ ಎಪಿಎಂಸಿ ಯಾರ್ಡ್ಗೆ ಕರೆದುಕೊಂಡು ಹೋಗಿ ಗೋದಾಮಿನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ₹40 ಸಾವಿರ ಕಿತ್ತುಕೊಂಡು, ಇನ್ನೂ ₹1.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>'ಪೊಲೀಸರಿಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಆದ್ದರಿಂದ ತಡವಾಗಿ ಬಂದು ದೂರು ನೀಡಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>