<p><strong>ತುಮಕೂರು</strong>: ತೀವ್ರ ಮಳೆಯಿಂದಾಗಿ ಏರಿಕೆಯತ್ತ ಮುಖ ಮಾಡಿದ್ದ ತರಕಾರಿ, ಸೊಪ್ಪಿನ ದರ ಈಗ ಇಳಿಕೆಯಾಗುತ್ತಾ ಸಾಗಿದ್ದು, ಹಣ್ಣುಗಳ ಬೆಲೆ ಹೆಚ್ಚಳದತ್ತ ಮುಖ ಮಾಡಿದೆ. ಟೊಮೆಟೊ ಬೆಲೆ ತೀವ್ರ ಕುಸಿತ ಕಂಡಿದೆ.</p>.<p>ಕಳೆದ ವಾರ ಏರಿಕೆಯಾಗಿದ್ದ ತರಕಾರಿ ಬೆಲೆ ಈ ವಾರ ಕಡಿಮೆಯಾಗಿದೆ. ಮಳೆ ನಿಂತ ನಂತರ ತರಕಾರಿ ಆವಕ ಹೆಚ್ಚಳವಾಗಿದ್ದು, ಧಾರಣೆ ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಮುಂದಿನ ಒಂದೆರಡು ವಾರಗಳಲ್ಲಿ ಮತ್ತಷ್ಟು ತಗ್ಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p>ಬಹುತೇಕ ತರಕಾರಿಗಳ ಬೆಲೆ ಅರ್ಧದಷ್ಟು ಇಳಿಕೆಯಾಗಿದ್ದು, ಬೀನ್ಸ್ ಬೆಲೆ ಅರ್ಧದಷ್ಟು ತಗ್ಗಿದ್ದು ಕೆ.ಜಿ ₹30–40ಕ್ಕೆ ಕುಸಿದಿದೆ. ಗೆಡ್ಡೆಕೋಸು ದರ ಗಣನೀಯವಾಗಿ ಕಡಿಮೆಯಾಗಿದ್ದು, ಕೆ.ಜಿ ₹30–40ಕ್ಕೆ ಬಂದಿದೆ. ಸದಾ ಕಡಿಮೆ ಬೆಲೆಗೆ ಸಿಗುತ್ತಿದ್ದಮೂಲಂಗಿ ಸಹ ದುಬಾರಿಯಾಗಿತ್ತು. ಈ ವಾರ ಕೆ.ಜಿ ₹10–15ಕ್ಕೆ ತಲುಪಿದೆ. ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದ ಹಸಿರು ಮೆಣಸಿನ ಕಾಯಿ, ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕೆ.ಜಿ ₹50–60ಕ್ಕೆ ಇಳಿಕೆ ಕಂಡಿದೆ.</p>.<p>ಕ್ಯಾರೆಟ್, ಆಲೂಗಡ್ಡೆ, ಬೆಂಡೆಕಾಯಿ, ಬದನೆಕಾಯಿ, ಹೂ ಕೋಸು, ತೊಂಡೆಕಾಯಿ, ಹಾಗಲಕಾಯಿ ದರ ಕಡಿಮೆಯಾಗಿದ್ದು, ನುಗ್ಗೆಕಾಯಿ ಕೆ.ಜಿ ₹100 ದಾಟಿದೆ. ಈರುಳ್ಳಿ ಧಾರಣೆ ನಿಧಾನವಾಗಿ ಏರಿಕೆಯತ್ತ ಸಾಗಿದೆ. ಸೌತೆಕಾಯಿ ಸಹ ಅಲ್ಪ ಹೆಚ್ಚಳವಾಗಿದೆ. ವಾರದಿಂದ ವಾರಕ್ಕೆ ಕುಸಿಯುತ್ತಲೇ ಇದ್ದ ಟೊಮೆಟೊ ಮತ್ತೆ ಈ ವಾರ ಸಹ ಅದೇ ದಾರಿಯಲ್ಲಿ ಸಾಗಿದ್ದು, ಕೆ.ಜಿ ₹10–15ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಷ್ಟಕರ ಎಂಬಂತಹ ವಾತಾವರಣ ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಆವಕ ಹೆಚ್ಚಾಗಿರುವುದೇ ಬೆಲೆ ಇಳಿಕೆಗೆ ಕಾರಣವಾಗಿದೆ.</p>.<p>ಸೊಪ್ಪು ಅಗ್ಗ: ಕುಸಿತ ಕಂಡು ಮತ್ತೆ ಚೇತರಿಸಿಕೊಂಡಿದ್ದ ಸೊಪ್ಪು, ಈ ವಾರ ಮತ್ತೊಮ್ಮೆ ಇಳಿಕೆಯತ್ತ ಮುಖ ಮಾಡಿದೆ. ಪಾಲಕ್ ಬಿಟ್ಟರೆ ಉಳಿದ ಸೊಪ್ಪು ಧಾರಣೆ ಕುಸಿದಿದ್ದು, ಸಬ್ಬಕ್ಕಿ ಸೊಪ್ಪು ಅರ್ಧದಷ್ಟು ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟ<br />ವಾಗುತ್ತಿದೆ.</p>.<p>ಹಣ್ಣು ದುಬಾರಿ: ಹಣ್ಣುಗಳ ಬೆಲೆ ಮತ್ತಷ್ಟು ದುಬಾರಿಯಾಗುತ್ತಲೇ ಸಾಗಿದ್ದು, ಸೇಬು, ಕಿತ್ತಳೆ ಬಿಟ್ಟರೆ ಉಳಿದ ಹಣ್ಣುಗಳ ದರ ಹೆಚ್ಚಳವಾಗಿದೆ. ಕಲ್ಲಂಗಡಿ, ಪಪ್ಪಾಯ ಹಣ್ಣು ಕೆ.ಜಿ ₹40ಕ್ಕೆ ತಲುಪಿದ್ದು, ದಾಳಿಂಬೆ, ಮೂಸಂಬಿ, ಸಪೋಟ ಸಹ ದುಬಾರಿಯಾಗಿವೆ. ಬಾಳೆ ಹಣ್ಣಿನ ಬೆಲೆಯೂ ಇಳಿಕೆಯಾಗುತ್ತಿಲ್ಲ. ದ್ರಾಕ್ಷಿ ಮತ್ತಷ್ಟು ದುಬಾರಿಯಾಗಿದೆ.</p>.<p>ಅಡುಗೆ ಎಣ್ಣೆ ಸ್ಥಿರ: ಏರಿಳಿತ ಕಂಡಿದ್ದ ಖಾದ್ಯ ತೈಲ ಈ ವಾರ ಹೆಚ್ಚಿನ ವ್ಯತ್ಯಾಸ ಕಂಡಿಲ್ಲ. ಸನ್ಫ್ಲವರ್ ಕೆ.ಜಿ ₹155, ಪಾಮಾಯಿಲ್ ಕೆ.ಜಿ ₹101–105, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p>ಬೇಳೆ ಧಾರಣೆ: ಕಳೆದ ಎರಡು ವಾರಗಳಿಂದ ಬೇಳೆ ಕಾಳುಗಳ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈ ವಾರ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಹುತೇಕ ಸ್ಥಿರವಾಗಿರುವುದು ಮಂಡಿಪೇಟೆ ಮಾರುಕಟ್ಟೆಯಲ್ಲಿ ಕಂಡುಬರುತ್ತದೆ.</p>.<p>ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಬೆಲೆಯಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಧನ್ಯ ಕೆ.ಜಿ ₹155–180, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹500–530, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹260–280, ಮೆಣಸು ಕೆ.ಜಿ ₹540–560, ಜೀರಿಗೆ ಕೆ.ಜಿ ₹285–290, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹80–85, ಚಕ್ಕೆ ಕೆ.ಜಿ ₹300–320, ಲವಂಗ ಕೆ.ಜಿ ₹750–780, ಗುಣಮಟ್ಟದ ಗಸಗಸೆ ಕೆ.ಜಿ ₹1,400–1,500, ಬಾದಾಮಿ ಕೆ.ಜಿ ₹620–650, ಗೋಡಂಬಿ ಕೆ.ಜಿ ₹680–720, ದ್ರಾಕ್ಷಿ ಕೆ.ಜಿ ₹230–240, ಹುಣಸೆಹಣ್ಣು ₹80–120ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p>ಕೋಳಿ ಅಲ್ಪ ದುಬಾರಿ: ಕಾರ್ತಿಕ ಮಾಸದಲ್ಲಿ ಸಾಕಷ್ಟು ಸಂಖ್ಯೆಯ ಜನರು ಮಾಂಸಹಾರ ತ್ಯಜಿಸುವುದರಿಂದ ಕೋಳಿ ಮಾಂಸದ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್ ಲೆಸ್ ಕೆ.ಜಿ ₹240, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹127ಕ್ಕೆ ಮಾರಾಟ<br />ವಾಗುತ್ತಿದೆ.</p>.<p>ಅಂಜಲ್ ಮೀನು ಏರಿಕೆ: ಕೆಲವು ಮೀನಿನ ಬೆಲೆ ಇಳಿಕೆಯಾಗಿದ್ದರೆ, ಕೆಲವು ದುಬಾರಿಯಾಗಿವೆ. ಬಂಗುಡೆ, ಬೂತಾಯಿ ಮೀನು ದರ ಗಣನೀಯವಾಗಿ ಕಡಿಮೆಯಾಗಿದ್ದರೆ, ಅಂಜಲ್ ಮೀನು ಬೆಲೆ ಏರಿಕೆಯಾಗಿದೆ. ಈಗ ಬಂಗುಡೆ, ಬೂತಾಯಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರೆ, ಇತರೆ ಮೀನು ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ. ಬಂಗುಡೆ ಕೆ.ಜಿ ₹160, ಬೂತಾಯಿ ಕೆ.ಜಿ ₹110, ಅಂಜಲ್ ಕೆ.ಜಿ ₹870, ಬಿಳಿಮಾಂಜಿ ಕೆ.ಜಿ ₹830, ಸೀಗಡಿ ಕೆ.ಜಿ ₹590ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ತೀವ್ರ ಮಳೆಯಿಂದಾಗಿ ಏರಿಕೆಯತ್ತ ಮುಖ ಮಾಡಿದ್ದ ತರಕಾರಿ, ಸೊಪ್ಪಿನ ದರ ಈಗ ಇಳಿಕೆಯಾಗುತ್ತಾ ಸಾಗಿದ್ದು, ಹಣ್ಣುಗಳ ಬೆಲೆ ಹೆಚ್ಚಳದತ್ತ ಮುಖ ಮಾಡಿದೆ. ಟೊಮೆಟೊ ಬೆಲೆ ತೀವ್ರ ಕುಸಿತ ಕಂಡಿದೆ.</p>.<p>ಕಳೆದ ವಾರ ಏರಿಕೆಯಾಗಿದ್ದ ತರಕಾರಿ ಬೆಲೆ ಈ ವಾರ ಕಡಿಮೆಯಾಗಿದೆ. ಮಳೆ ನಿಂತ ನಂತರ ತರಕಾರಿ ಆವಕ ಹೆಚ್ಚಳವಾಗಿದ್ದು, ಧಾರಣೆ ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಮುಂದಿನ ಒಂದೆರಡು ವಾರಗಳಲ್ಲಿ ಮತ್ತಷ್ಟು ತಗ್ಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p>ಬಹುತೇಕ ತರಕಾರಿಗಳ ಬೆಲೆ ಅರ್ಧದಷ್ಟು ಇಳಿಕೆಯಾಗಿದ್ದು, ಬೀನ್ಸ್ ಬೆಲೆ ಅರ್ಧದಷ್ಟು ತಗ್ಗಿದ್ದು ಕೆ.ಜಿ ₹30–40ಕ್ಕೆ ಕುಸಿದಿದೆ. ಗೆಡ್ಡೆಕೋಸು ದರ ಗಣನೀಯವಾಗಿ ಕಡಿಮೆಯಾಗಿದ್ದು, ಕೆ.ಜಿ ₹30–40ಕ್ಕೆ ಬಂದಿದೆ. ಸದಾ ಕಡಿಮೆ ಬೆಲೆಗೆ ಸಿಗುತ್ತಿದ್ದಮೂಲಂಗಿ ಸಹ ದುಬಾರಿಯಾಗಿತ್ತು. ಈ ವಾರ ಕೆ.ಜಿ ₹10–15ಕ್ಕೆ ತಲುಪಿದೆ. ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದ ಹಸಿರು ಮೆಣಸಿನ ಕಾಯಿ, ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕೆ.ಜಿ ₹50–60ಕ್ಕೆ ಇಳಿಕೆ ಕಂಡಿದೆ.</p>.<p>ಕ್ಯಾರೆಟ್, ಆಲೂಗಡ್ಡೆ, ಬೆಂಡೆಕಾಯಿ, ಬದನೆಕಾಯಿ, ಹೂ ಕೋಸು, ತೊಂಡೆಕಾಯಿ, ಹಾಗಲಕಾಯಿ ದರ ಕಡಿಮೆಯಾಗಿದ್ದು, ನುಗ್ಗೆಕಾಯಿ ಕೆ.ಜಿ ₹100 ದಾಟಿದೆ. ಈರುಳ್ಳಿ ಧಾರಣೆ ನಿಧಾನವಾಗಿ ಏರಿಕೆಯತ್ತ ಸಾಗಿದೆ. ಸೌತೆಕಾಯಿ ಸಹ ಅಲ್ಪ ಹೆಚ್ಚಳವಾಗಿದೆ. ವಾರದಿಂದ ವಾರಕ್ಕೆ ಕುಸಿಯುತ್ತಲೇ ಇದ್ದ ಟೊಮೆಟೊ ಮತ್ತೆ ಈ ವಾರ ಸಹ ಅದೇ ದಾರಿಯಲ್ಲಿ ಸಾಗಿದ್ದು, ಕೆ.ಜಿ ₹10–15ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಷ್ಟಕರ ಎಂಬಂತಹ ವಾತಾವರಣ ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಆವಕ ಹೆಚ್ಚಾಗಿರುವುದೇ ಬೆಲೆ ಇಳಿಕೆಗೆ ಕಾರಣವಾಗಿದೆ.</p>.<p>ಸೊಪ್ಪು ಅಗ್ಗ: ಕುಸಿತ ಕಂಡು ಮತ್ತೆ ಚೇತರಿಸಿಕೊಂಡಿದ್ದ ಸೊಪ್ಪು, ಈ ವಾರ ಮತ್ತೊಮ್ಮೆ ಇಳಿಕೆಯತ್ತ ಮುಖ ಮಾಡಿದೆ. ಪಾಲಕ್ ಬಿಟ್ಟರೆ ಉಳಿದ ಸೊಪ್ಪು ಧಾರಣೆ ಕುಸಿದಿದ್ದು, ಸಬ್ಬಕ್ಕಿ ಸೊಪ್ಪು ಅರ್ಧದಷ್ಟು ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟ<br />ವಾಗುತ್ತಿದೆ.</p>.<p>ಹಣ್ಣು ದುಬಾರಿ: ಹಣ್ಣುಗಳ ಬೆಲೆ ಮತ್ತಷ್ಟು ದುಬಾರಿಯಾಗುತ್ತಲೇ ಸಾಗಿದ್ದು, ಸೇಬು, ಕಿತ್ತಳೆ ಬಿಟ್ಟರೆ ಉಳಿದ ಹಣ್ಣುಗಳ ದರ ಹೆಚ್ಚಳವಾಗಿದೆ. ಕಲ್ಲಂಗಡಿ, ಪಪ್ಪಾಯ ಹಣ್ಣು ಕೆ.ಜಿ ₹40ಕ್ಕೆ ತಲುಪಿದ್ದು, ದಾಳಿಂಬೆ, ಮೂಸಂಬಿ, ಸಪೋಟ ಸಹ ದುಬಾರಿಯಾಗಿವೆ. ಬಾಳೆ ಹಣ್ಣಿನ ಬೆಲೆಯೂ ಇಳಿಕೆಯಾಗುತ್ತಿಲ್ಲ. ದ್ರಾಕ್ಷಿ ಮತ್ತಷ್ಟು ದುಬಾರಿಯಾಗಿದೆ.</p>.<p>ಅಡುಗೆ ಎಣ್ಣೆ ಸ್ಥಿರ: ಏರಿಳಿತ ಕಂಡಿದ್ದ ಖಾದ್ಯ ತೈಲ ಈ ವಾರ ಹೆಚ್ಚಿನ ವ್ಯತ್ಯಾಸ ಕಂಡಿಲ್ಲ. ಸನ್ಫ್ಲವರ್ ಕೆ.ಜಿ ₹155, ಪಾಮಾಯಿಲ್ ಕೆ.ಜಿ ₹101–105, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p>ಬೇಳೆ ಧಾರಣೆ: ಕಳೆದ ಎರಡು ವಾರಗಳಿಂದ ಬೇಳೆ ಕಾಳುಗಳ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈ ವಾರ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಹುತೇಕ ಸ್ಥಿರವಾಗಿರುವುದು ಮಂಡಿಪೇಟೆ ಮಾರುಕಟ್ಟೆಯಲ್ಲಿ ಕಂಡುಬರುತ್ತದೆ.</p>.<p>ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಬೆಲೆಯಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಧನ್ಯ ಕೆ.ಜಿ ₹155–180, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹500–530, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹260–280, ಮೆಣಸು ಕೆ.ಜಿ ₹540–560, ಜೀರಿಗೆ ಕೆ.ಜಿ ₹285–290, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹80–85, ಚಕ್ಕೆ ಕೆ.ಜಿ ₹300–320, ಲವಂಗ ಕೆ.ಜಿ ₹750–780, ಗುಣಮಟ್ಟದ ಗಸಗಸೆ ಕೆ.ಜಿ ₹1,400–1,500, ಬಾದಾಮಿ ಕೆ.ಜಿ ₹620–650, ಗೋಡಂಬಿ ಕೆ.ಜಿ ₹680–720, ದ್ರಾಕ್ಷಿ ಕೆ.ಜಿ ₹230–240, ಹುಣಸೆಹಣ್ಣು ₹80–120ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p>ಕೋಳಿ ಅಲ್ಪ ದುಬಾರಿ: ಕಾರ್ತಿಕ ಮಾಸದಲ್ಲಿ ಸಾಕಷ್ಟು ಸಂಖ್ಯೆಯ ಜನರು ಮಾಂಸಹಾರ ತ್ಯಜಿಸುವುದರಿಂದ ಕೋಳಿ ಮಾಂಸದ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್ ಲೆಸ್ ಕೆ.ಜಿ ₹240, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹127ಕ್ಕೆ ಮಾರಾಟ<br />ವಾಗುತ್ತಿದೆ.</p>.<p>ಅಂಜಲ್ ಮೀನು ಏರಿಕೆ: ಕೆಲವು ಮೀನಿನ ಬೆಲೆ ಇಳಿಕೆಯಾಗಿದ್ದರೆ, ಕೆಲವು ದುಬಾರಿಯಾಗಿವೆ. ಬಂಗುಡೆ, ಬೂತಾಯಿ ಮೀನು ದರ ಗಣನೀಯವಾಗಿ ಕಡಿಮೆಯಾಗಿದ್ದರೆ, ಅಂಜಲ್ ಮೀನು ಬೆಲೆ ಏರಿಕೆಯಾಗಿದೆ. ಈಗ ಬಂಗುಡೆ, ಬೂತಾಯಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರೆ, ಇತರೆ ಮೀನು ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ. ಬಂಗುಡೆ ಕೆ.ಜಿ ₹160, ಬೂತಾಯಿ ಕೆ.ಜಿ ₹110, ಅಂಜಲ್ ಕೆ.ಜಿ ₹870, ಬಿಳಿಮಾಂಜಿ ಕೆ.ಜಿ ₹830, ಸೀಗಡಿ ಕೆ.ಜಿ ₹590ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>