ವಿಷಯ ತಿಳಿದ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಿಕಾಂತ್, ಎಸ್ಐ ಮುದ್ದಯ್ಯ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜು ಅವರ ಕಾಳಜಿಯನ್ನು ಶ್ಲಾಘಿಸಿ ಜಿಂಕೆ ಮರಿಯನ್ನು ಕರೆದೊಯ್ದರು. ಜಿಂಕೆ ಮರಿಯನ್ನು ಆರೈಕೆ ಮಾಡಿ ಸ್ವತಂತ್ರವಾಗಿ ಬದುಕುವ ಶಕ್ತಿ ಬಂದಾಗ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು.