ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಕೆ ಮರಿ ರಕ್ಷಣೆ: ಶ್ಲಾಘನೆ

Last Updated 10 ಮೇ 2019, 12:52 IST
ಅಕ್ಷರ ಗಾತ್ರ

ಹೊನ್ನವಳ್ಳಿ (ತಿಪಟೂರು): ಬಿದರೆಗುಡಿ ಕಾವಲಿ ಬಳಿ ಆಹಾರ ಹುಡುಕಿ ಆಚೆ ಬಂದಿದ್ದ, ನಾಯಿ ಬಾಯಿಗೆ ತುತ್ತಾಗಲಿದ್ದ ಜಿಂಕೆ ಮರಿಯನ್ನು ಗ್ರಾಮಸ್ಥರೊಬ್ಬರು ರಕ್ಷಿಸಿದ್ದಾರೆ.

ಜಿಂಕೆ ಮರಿಯನ್ನು ನಾಯಿ ಹಿಂಡು ಓಡಿಸಿಕೊಂಡು ಬರುತ್ತಿದ್ದುದನ್ನು ನೋಡಿದ ಬಸವರಾಜು ಹಲ್ಕೂರಯ್ಯ ಬೀದಿಮನೆ ಅವರು ನಾಯಿಗಳನ್ನು ಓಡಿಸಿ ಮರಿಯನ್ನು ರಕ್ಷಿಸಿದರು.

ಮನೆಯಲ್ಲಿ ಆರೈಕೆ ಮಾಡಿ ನಂತರ ಸ್ಥಳೀಯ ಪಶು ಆಸ್ಪತ್ರೆಗೆ ಹೊತ್ತೊಯ್ದರು. ಗಾಯಗೊಂಡಿದ್ದ ಜಿಂಕೆ ಮರಿಗೆ ಪಶು ಪರೀಕ್ಷಕಿ ಸುಜಾತಾ ಚಿಕಿತ್ಸೆ ನೀಡಿದರು.

ವಿಷಯ ತಿಳಿದ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಿಕಾಂತ್, ಎಸ್‍ಐ ಮುದ್ದಯ್ಯ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜು ಅವರ ಕಾಳಜಿಯನ್ನು ಶ್ಲಾಘಿಸಿ ಜಿಂಕೆ ಮರಿಯನ್ನು ಕರೆದೊಯ್ದರು. ಜಿಂಕೆ ಮರಿಯನ್ನು ಆರೈಕೆ ಮಾಡಿ ಸ್ವತಂತ್ರವಾಗಿ ಬದುಕುವ ಶಕ್ತಿ ಬಂದಾಗ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT