‘ತಾಲ್ಲೂಕಿಗೆ ನಿಗಧಿಪಡಿಸಿದಂತೆ 5.5 ಟಿಎಂಸಿ ಹೇಮಾವತಿ ನೀರನ್ನು ಟಿ.ಬಿ.ಸಿ. ನಾಲೆಯಿಂದ ಬಿಡಲಾಗಿದೆ. ಆದರೆ ಎನ್.ಬಿ.ಸಿ ನಾಲೆಯಿಂದ ಇಲ್ಲಿಯ ತನಕ ಒಂದು ತೊಟ್ಟೂ ನೀರು ಬಿಟ್ಟಿಲ್ಲ ಶೀಘ್ರವೇ ನೀರು ಬಿಡಬೇಕು-ಎಂ.ಟಿ.ಕೃಷ್ಣಪ್ಪ ಶಾಸಕ
- ಎನ್ಡಿಆರ್ಎಫ್ ಅಡಿ ತಾಲ್ಲೂಕಿಗೆ ₹ 25 ಲಕ್ಷ ಅನುದಾನ ಬಂದಿದ್ದು ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿಯಿಂದ ಹೊಸದಾಗಿ ಕೊರೆಯಿಸಿರುವ ಕೊಳವೆ ಬಾವಿಗಳಿಗೆ ಪೈಪ್ ಲೈನ್ ಅಳವಡಿಕೆಗೆ ಹಣ ಬಳಸಲಾಗುತ್ತಿದೆವೈ.ಎಂ.ರೇಣುಕುಮಾರ್ ತಹಶೀಲ್ದಾರ್
ಸರ್ಕಾರ ಮಲ್ಲಾಘಟ್ಟ ಕೆರೆಯನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡಿಸಬೇಕು. ಇದರಿಂದ ಆ ಭಾಗದ ಲೋಕಮ್ಮನಹಳ್ಳಿ ಆನೇಕೆರೆ ಕೊಡಗೀಹಳ್ಳಿ ಮತ್ತು ಬಾಣಸಂದ್ರ ಪಂಚಾಯಿತಿ ವ್ಯಾಪ್ತಿಯ ಅಪಾರ ಗ್ರಾಮಗಳಿಗೆ ಶ್ವಾಶ್ವತ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಅನುಕೂಲವಾಗಲಿದೆ.-ದೊಡ್ಡಾಘಟ್ಟ ಚಂದ್ರೇಶ್ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್
ಕೊಳವೆ ಬಾವಿ ಕೊರೆಯಿಸುವುದು ನೀರಿನ ಸಮಸ್ಯೆ ನೀಗಿಸುವ ಪರಿಹಾರ ಕ್ರಮವಲ್ಲ. ಸರ್ಕಾರ ಕೆರೆಕಟ್ಟೆಗಳ ಹೂಳೆತ್ತಿಸಿ ಪ್ರತಿಯೊಬ್ಬ ರೈತರಿಗೂ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳುವಂತೆ ಅನುದಾನ ನೀಡಿದಾಗ ಮಾತ್ರ ನೀರಿನ ಸಂರಕ್ಷಣೆ ಮಾಡಲು ಸಾದ್ಯವಾಗಲಿದೆ- ಎನ್.ಆರ್.ಜಯರಾಮ್ ಅಧ್ಯಕ್ಷ ತಾಲ್ಲೂಕು ತೆಂಗು–ಅಡಿಕೆ ಬೆಳೆಗಾರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.