ಇಂದು ಸಂತೆ ನಡೆಯುವಂತಿಲ್ಲ. ಸೊಪ್ಪು, ತರಕಾರಿಗಳನ್ನು ಏನು ಮಾಡಬೇಕು. ಈ ಮಾಹಿತಿಯನ್ನು ಎರಡು - ಮೂರು ದಿನಗಳ ಹಿಂದೆಯೇ ತಿಳಿಸಿದ್ದರೆ ನಾವು ಬರುತ್ತಿರಲಿಲ್ಲ. ಈಗ ಎರಡು ದಿನಗಳ ಕಾಲ ತಾಲ್ಲೂಕಿನ ಸುತ್ತ - ಮುತ್ತ ಸಂತೆ ಇಲ್ಲದೆ ಇರುವುದರಿಂದ ತರಕಾರಿಯೂ ವ್ಯರ್ಥ, ಹಣ ಕೂಡ ಖರ್ಚು ಮಾಡಿದ್ದೇವೆಂದು ಅಧಿಕಾರಿಗಳ ಮುಂದೆ ರೈತರು ಅಳಲು ತೋಡಿಕೊಂಡರು.