ವಿದ್ಯುತ್ ಬಳಸಬೇಡಿ: ತುಮಕೂರು: ನಗರದ ಹನುಮಂತ ಪುರ, ಆದರ್ಶನಗರ, ಬೆಳಗುಂಬ, ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ಶಿರಾಗೇಟ್, ಮಂಡಿಪೇಟೆ, ಅಗ್ರಹಾರ, ರಂಗಾಪುರ, ಲಿಂಗಾಪುರ, ಜೈಪುರ, ಹೊಂಬಯ್ಯನ ಪಾಳ್ಯ, ನರಸಾಪುರ, ಗುರುವಿನಯ್ಯನ ಪಾಳ್ಯ, ದಿಬ್ಬೂರು, ಅಜ್ಜಪ್ಪನ ಹಳ್ಳಿ, ಸ್ಟೇಡಿಯಂ ರಸ್ತೆ, ಎನ್.ಆರ್. ಕಾಲೋನಿ, ತಿಮ್ಮಲಾಪುರ, ಅಣ್ಣೇತೋಟ, ಶಾರದಾದೇವಿ ನಗರ, ಕುಪ್ಪೂರು ವ್ಯಾಪ್ತಿಯ ಗಣೇಶ ಪೆಂಡಾಲ್ಸಂಘಟಕರು ಗಣೇಶ ಹಬ್ಬಕ್ಕೆ ಪೂರ್ವಾನುಮತಿ ಪಡೆಯದೆ ವಿದ್ಯುತ್ ಬಳಕೆ ಮಾಡಬಾರದು ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಚ್.ಸಿ.ಧನ್ಯಕುಮಾರ್ ಸೂಚಿಸಿದ್ದಾರೆ.