ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ‘ಶಿರಾ ನಗರಸಭೆಗೆ ಜನತೆ ವಾರ್ಷಿಕವಾಗಿ ಸುಮಾರು ₹ 33 ಕೋಟಿ ಕಂದಾಯ ಪಾವತಿಸುತ್ತಾರೆ. ಆದರೆ, ನಗರಸಭೆ ಆಡಳಿತ ಇಲ್ಲಿಯವರೆಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಪ್ರಥಮ ಬಾರಿಗೆ ಪಕ್ಷವು ಚುನಾವಣೆಗೆ ಸ್ವರ್ಧೆ ಮಾಡುತ್ತಿದೆ. ಜನತೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.