ಶ್ರವಣ ಮಾಸದಲ್ಲಿನ ಹಬ್ಬ, ಮದುವೆ ಮತ್ತು ಸಮಾರಂಭಗಳಿಗೆ ಹೂವಿನ ಫಸಲು ಬರುವಂತೆ ಯೋಚಿಸಿ ನೂರಾರು ಎಕರೆಯಲ್ಲಿ ಹೂವು ಬೆಳೆದಿದ್ದಾರೆ. ಆದರೀಗ ಹೂವಿನ ತಾಕುಗಳು ಮಳೆ ನೀರು ಕುಡಿದು ಬೇರು ಕೊಳೆಯಲು ಪ್ರಾರಂಭವಾಗಿದೆ. ಗಿಡಗಳಿಗೆ ಸೊರಗು ರೋಗ ಬರುವ ಮುನ್ಸೂಚನೆ ಕಂಡು ಬರುತ್ತಿದೆ. ಗಿಡಗಳಿಗೆ ಹುಳಗಳು ಬಿದ್ದು ಹಾಳಾಗುವುದು ಹೆಚ್ಚುತ್ತಿದೆ. ಮೋಡದ ಕಾರಣ ಹೂವು ಸರಿಯಾಗಿ ಬರದೇ ಮೊಗ್ಗಿನಲ್ಲಿ ನಲುಗುತ್ತಿವೆ.