ಕೊಡಿಗೇನಹಳ್ಳಿ: ಹೋಬಳಿಯ ತಿಂಗಳೂರು-ಶ್ರಾವಂಡನಹಳ್ಳಿ ದಾರಿಯ ಮಧ್ಯೆಭಾಗದಲ್ಲಿರುವ ಸ್ಮಶಾನದ ಬಳಿ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರ ಗ್ರಾಮದ ರವಿ(35) ಎಂಬುವರಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಡಿ. 12ರಂದು ಆತ ಮನೆ ಬಿಟ್ಟಿದ್ದು, ಸೌದೆ ಕಡಿಯುವ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಕೊಳೆತ ವಾಸನೆ ಬರುತ್ತಿದ್ದನ್ನು ಮನಗಂಡ ಕುರಿಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮಧುಗಿರಿ ಸಿಪಿಐ ಸರ್ದಾರ್, ಕೊಡಿಗೇನಹಳ್ಳಿ ಠಾಣೆಯ ಪಿಎಸ್ಐ ಜೆ.ಆರ್. ನಾಗರಾಜು ಭೇಟಿ ನೀಡಿ ಪರಿಶೀಲಿಸಿದರು.