ತುಮಕೂರು: ಹೇಮಾವತಿ ಜಲಾಶಯದಿಂದ ಶುಕ್ರವಾರ ಸಂಜೆ ತುಮಕೂರು ನಾಲೆಗೆ ನೀರು ಹರಿಬಿಡಲಾಗಿದೆ. ಮೂರು ದಿನಗಳಲ್ಲಿ ಹೇಮಾವತಿ ನೀರು ಜಿಲ್ಲೆ ಪ್ರವೇಶಿಸಲಿದೆ.
ಆ.10ರಂದು ಬೆಂಗಳೂರಿನಲ್ಲಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಅಲ್ಲಿ ಯಾವ ಕೆರೆಗಳಿಗೆ ಎಷ್ಟು ದಿನ ನೀರು ಹರಿಸಬೇಕು ಎನ್ನುವ ವೇಳಾಪಟ್ಟಿ ರೂಪಿಸಲಾಗುತ್ತದೆ ಎಂದು ಹೇಮಾವತಿ ನಾಲಾ ಕಚೇರಿಯ ಮೂಲಗಳು ತಿಳಿಸಿವೆ.
ಡಿಸೆಂಬರ್ವರೆಗೂ ಜಿಲ್ಲೆಗೆ ನೀರು ಹರಿಯಲಿದೆ. ಸಾಮಾನ್ಯವಾಗಿ ಹೇಮಾವತಿ ನೀರನ್ನು ಬುಗುಡನಹಳ್ಳಿ ಕೆರೆಗೆ ಮೊದಲು ತುಂಬಿಸಲಾಗುತ್ತಿತ್ತು. ಆದರೆ ಇನ್ನೂ ಕೆರೆಯಲ್ಲಿ ಅರ್ಧ ಭಾಗ ನೀರಿದೆ. ಈ ಕಾರಣದಿಂದ ಉಳಿದ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎನ್ನುತ್ತವೆ ಮೂಲಗಳು.