ಪಾವಗಡ: ಮಳೆಯಿಂದಾಗಿ ಕಟಾವು ಮಾಡಿದ ಶೇಂಗಾ ಹಾನಿ

ಪಾವಗಡ: ತಾಲ್ಲೂಕಿನ ಹಲವೆಡೆ ಮಂಗಳವಾರ ಮಳೆಯಾಗಿದೆ. ತಡವಾಗಿ ಶೆಂಗಾ ಬಿತ್ತನೆ ಮಾಡಿದ್ದ ರೈತರಿಗೆ ಮಳೆಯಿಂದ ಅನುಕೂಲವಾಗಿದೆ. ಆದರೆ ಶೀಘ್ರ ಬಿತ್ತನೆ ಮಾಡಿ ಕಟಾವು ಮಾಡಿದ್ದ ರೈತರಿಗೆ ಮಳೆಯಿಂದ ಬೆಳೆ ಹಾನಿಯಾಗಿದೆ.
ಜಮೀನಿನಲ್ಲಿಯೆ ಬಿಟ್ಟಿದ್ದ ಶೇಂಗಾ ಮಳೆಗೆ ಕೊಚ್ಚಿ ಹೋಗಿದೆ.
ಅರಸೀಕೆರೆ ಮಳೆ ಮಾಪನದಲ್ಲಿ 60 ಮಿ.ಮೀ., ನಾಗಲಮಡಿಕೆ 20 ಮಿ.ಮೀ., ಪಾವಗಡ 18 ಮಿ.ಮೀ., ತಿರುಮಣಿ 8 ಮಿ.ಮೀ ಮಳೆಯಾಗಿದೆ.
ನಿಡಗಲ್ ಹೋಬಳಿಯ ಕೆಲವೆಡೆ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಸಮಸ್ಯೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.