ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗುರುಳಿದ ಮರ: ವಾಹನ ಸವಾರ ಪಾರು

Last Updated 5 ಆಗಸ್ಟ್ 2020, 9:03 IST
ಅಕ್ಷರ ಗಾತ್ರ

ತಿಪಟೂರು: ಭಾರೀ ಮಳೆಯಿಂದಾಗಿ ನಗರದ ರಾಷ್ಟ್ರೀಯ ಹೆದ್ದಾರಿಗೆ ಮರವೊಂದು ಬಿದ್ದಿದ್ದು, ವಾಹನ ಸವಾರ ಪ್ರಣಾಪಾಯದಿಂದ ಪಾರಾಗಿದ್ದಾರೆ.

ನಗರದ ಕಲ್ಪತರು ಕ್ರೀಡಾಂಗಣದ ಮುಂಭಾಗ ಇದ್ದ ಮರ ಮಳೆಯ ರಭಸಕ್ಕೆ ಬುಡಸಮೇತ ರಸ್ತೆಗೆ ಬಿದ್ದಿದೆ. ಇದರಿಂದ ಕೆಲಗಂಟೆಗಳ ಕಾಲ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡಿತ್ತು. ಜತೆಗೆ 4-5 ವಿದ್ಯುತ್ ಕಂಬಗಳು ಸಹ ಧರೆಗುಳಿವೆ.

ಮರ ಬೀಳುವ ಸಮಯಕ್ಕೆ ವಾಹನವೊಂದು ಅದೇ ಸ್ಥಳದಲ್ಲಿ ಸಾಗುತ್ತಿತ್ತು. ವಾಹನ ಚಾಲಕ ಕ್ಷಣಾರ್ಧದಲ್ಲೇ ಬ್ರೇಕ್ ಹಾಕಿ ವಾಹನದ ದಿಕ್ಕನ್ನು ಬದಲಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನ ಸಂಚಾರ ಕಡಿಮೆ ಇದ್ದಿದ್ದರಿಂದ ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಅರಣ್ಯ ಇಲಾಖೆ ಸಿಬ್ಬಂದಿ ಮರ ಕಡಿದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT