ಪ್ರತಿಭಟನೆಯಲ್ಲಿ ಡಿಎಸ್ಎಸ್ ಮುಖಂಡ ಲಿಂಗದೇವರು ಮಾತನಾಡಿ, ‘ಪಟ್ಟಣದ ಪುರಸಭೆಯಲ್ಲಿ 22 ವರ್ಷಗಳಿಂದ ವಾಟರ್ಮನ್ ಆಗಿ ಕಸ ವಿಲೇವಾರಿ ಮಾಡುವ ಚಾಲಕರಾಗಿ 25ಕ್ಕೂ ನೌಕರರು ಕೆಲಸ ಮಾಡುತ್ತಿದ್ದು, ಈ ನೌಕರರು ಇಷ್ಟು ವರ್ಷ ಸರ್ಕಾರದ ಯಾವುದೇ ಸೌಲಭ್ಯ ಪಡೆಯದೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸರಿಯಾಗಿ ಸಂಬಳ ಕೊಡದೆ ಇಎಸ್ಐ, ಪಿಎಪ್ ಯಾವುದೇ ಸೌಲಭ್ಯವಿಲ್ಲ’ ಎಂದರು.