ಆದರೆ ಹೀಗೆ ಸಾಹಿತ್ಯಾಸಕ್ತರಿಗೆ ನಿರಾಸೆ ಆಗುವ ರೀತಿ ತರಾತುರಿಯಲ್ಲಿ ಉದ್ಘಾಟನೆ ಆಗಿದ್ದು ಅಪೇಕ್ಷಣೀಯವಲ್ಲ. ತೀನಂಶ್ರೀ ಅವರಿಗೆ ಘನತೆ-ಗೌರವ ತರುವ ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಕನ್ನಡ ಸಂಘಟನೆಗಳು, ಸಾಹಿತಿಗಳು ಒಟ್ಟಾಗಿ ಸೇರಿ ತೀನಂಶ್ರೀ ಕುರಿತ ವಿಚಾರ ಸಂಕಿರಣ ಏರ್ಪಡಿಸುವ ಮೂಲಕ ಒಂದು ಸಾಹಿತ್ಯ–ಸಾಂಸ್ಕೃತಿಕ ಹಬ್ಬದಂತೆ ಮಾಡಬಹುದಿತ್ತು ಎಂದಿದ್ದಾರೆ.