<p><strong>ತುಮಕೂರು:</strong> ರಂಗಭೂಮಿ ಜನರಲ್ಲಿ ಅರಿವು ಮೂಡಿಸಿ, ಕ್ರಿಯಾಶೀಲರನ್ನಾಗಿಸುತ್ತದೆ. ಹೀಗಾಗಿ ರಂಗ ಚಟುವಟಿಕೆಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಲೇಖಕಿ ಬಾ.ಹ. ರಮಾಕುಮಾರಿ ಹೇಳಿದರು.</p>.<p>ನಗರದಲ್ಲಿ ಈಚೆಗೆ ಅಭಿನವ ರಂಗ ಸಂಪನ್ಮೂಲಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ರಂಗಭೂಮಿಯ ಇಂದಿನ ಸ್ಥಿತಿ-ಗತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ರಂಗ ಕಲಾವಿದರಿಗೆ ಸಹಕಾರ ತುಂಬಾ ಮುಖ್ಯ. ಕಲಾವಿದರನ್ನು ಗೌರವಿಸಿ, ಬೆಳೆಸಿ, ಅವರನ್ನು ಮುಖ್ಯಭೂಮಿಕೆಯಲ್ಲಿ ತರುವುದಕ್ಕೆ ಜನಸಾಮಾನ್ಯರು, ಸಹೃದಯರುಮುಂದಾಗಬೇಕು. ನಾಟಕ ಎನ್ನುವುದು ಪ್ರಸ್ತುತ ಸಮಸ್ಯೆ ಪರಿಚಯಿಸುವ ಒಂದು ಕನ್ನಡಿಯಂತೆಎಂದರು.</p>.<p>ಲೇಖಕಿ ಶೈಲಾ ನಾಗರಾಜ್, ‘ಪ್ರಯೋಗಾತ್ಮಕ ನಾಟಕಗಳಿಂದ ವಿಭಿನ್ನವಾದ ಹೊಸ ದಾರಿಸೃಷ್ಟಿಸಲು ಸಾಧ್ಯವಾಗುತ್ತದೆ. ಹಲವಾರು ತೊಡಕುಗಳನ್ನು ದಾಟಿ ನಿರ್ದೇಶಕರು ನಾಟಕ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ರಂಗಭೂಮಿಯು ಎಲ್ಲರಿಗೂ ಜೀವನ ಕಟ್ಟಿಕೊಟ್ಟಿದೆ. ಕಲೆಗೆ ಯಾವತ್ತೂ ಸೋಲಿಲ್ಲ. ರಂಗಭೂಮಿ ನಿರಂತರ ಯಾನವಾಗಿದೆ’ ಎಂದು ತಿಳಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ರಾಣಿ ಚಂದ್ರಶೇಖರ್ ಮಾತನಾಡಿದರು. ಪ್ರಮುಖರಾದ ಎಂ.ಎಸ್. ರಂಜಿತಾ ಇದ್ದರು.‘ಪಾರಿವಾಳ’ ನಾಟಕ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ರಂಗಭೂಮಿ ಜನರಲ್ಲಿ ಅರಿವು ಮೂಡಿಸಿ, ಕ್ರಿಯಾಶೀಲರನ್ನಾಗಿಸುತ್ತದೆ. ಹೀಗಾಗಿ ರಂಗ ಚಟುವಟಿಕೆಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಲೇಖಕಿ ಬಾ.ಹ. ರಮಾಕುಮಾರಿ ಹೇಳಿದರು.</p>.<p>ನಗರದಲ್ಲಿ ಈಚೆಗೆ ಅಭಿನವ ರಂಗ ಸಂಪನ್ಮೂಲಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ರಂಗಭೂಮಿಯ ಇಂದಿನ ಸ್ಥಿತಿ-ಗತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ರಂಗ ಕಲಾವಿದರಿಗೆ ಸಹಕಾರ ತುಂಬಾ ಮುಖ್ಯ. ಕಲಾವಿದರನ್ನು ಗೌರವಿಸಿ, ಬೆಳೆಸಿ, ಅವರನ್ನು ಮುಖ್ಯಭೂಮಿಕೆಯಲ್ಲಿ ತರುವುದಕ್ಕೆ ಜನಸಾಮಾನ್ಯರು, ಸಹೃದಯರುಮುಂದಾಗಬೇಕು. ನಾಟಕ ಎನ್ನುವುದು ಪ್ರಸ್ತುತ ಸಮಸ್ಯೆ ಪರಿಚಯಿಸುವ ಒಂದು ಕನ್ನಡಿಯಂತೆಎಂದರು.</p>.<p>ಲೇಖಕಿ ಶೈಲಾ ನಾಗರಾಜ್, ‘ಪ್ರಯೋಗಾತ್ಮಕ ನಾಟಕಗಳಿಂದ ವಿಭಿನ್ನವಾದ ಹೊಸ ದಾರಿಸೃಷ್ಟಿಸಲು ಸಾಧ್ಯವಾಗುತ್ತದೆ. ಹಲವಾರು ತೊಡಕುಗಳನ್ನು ದಾಟಿ ನಿರ್ದೇಶಕರು ನಾಟಕ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ರಂಗಭೂಮಿಯು ಎಲ್ಲರಿಗೂ ಜೀವನ ಕಟ್ಟಿಕೊಟ್ಟಿದೆ. ಕಲೆಗೆ ಯಾವತ್ತೂ ಸೋಲಿಲ್ಲ. ರಂಗಭೂಮಿ ನಿರಂತರ ಯಾನವಾಗಿದೆ’ ಎಂದು ತಿಳಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ರಾಣಿ ಚಂದ್ರಶೇಖರ್ ಮಾತನಾಡಿದರು. ಪ್ರಮುಖರಾದ ಎಂ.ಎಸ್. ರಂಜಿತಾ ಇದ್ದರು.‘ಪಾರಿವಾಳ’ ನಾಟಕ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>