ಕೊರಟಗೆರೆ: ನ್ಯಾಯಾಲಯ ಕಟ್ಟಡ ಮುಂಭಾಗದ ರಸ್ತೆಯಲ್ಲಿ ಬೃಹದಾಕಾರದ ಗುಂಡಿಯೊಂದು ಬಿದ್ದಿದೆ. ದಿನನಿತ್ಯ ಸಂಚಾರ ಮಾಡುವವರು ಅಪಘಾತಕ್ಕೀಡಾಗತ್ತಿದ್ದಾರೆ.
ಮುಖ್ಯ ರಸ್ತೆಯಲ್ಲಿ ಅತಿ ವೇಗವಾಗಿ ಬರುವ ವಾಹನ ಸವಾರರು ಒಮ್ಮಿಂದೊಮ್ಮೆಲೆ ಕಾಣುವ ಬೃಹತ್ ಗುಂಡಿ ನೋಡಿದ ತಕ್ಷಣ ತಮ್ಮ ವಾಹನಗಳನ್ನು ಹತೋಟಿಗೆ ತೆಗೆದುಕೊಳ್ಳಲು ಹೋಗುವ ಸಂದರ್ಭದಲ್ಲಿ ಏಕಾಏಕಿ ಅಪಘಾತಕ್ಕೀಡಾಗುತ್ತಿದ್ದಾರೆ. ರಾತ್ರಿ ವೇಳೆ ಈ ಗುಂಡಿ ವಾಹನ ಸವಾರರಿಗೆ ಕಾಣದೆ ಇರುವುದರಿಂದ ಅಪಘಾತಕ್ಕೀಡಾಗುವವರ ಸಂಖ್ಯೆ ಜಾಸ್ತಿಯಾಗಿದೆ.
ಅನೇಕ ದ್ವಿಚಕ್ರ ವಾಹನ ಸವಾರರು ಈ ಜಾಗದಲ್ಲಿ ಅಪಘಾತಕ್ಕೀಡಾಗಿದ್ದಾರೆ. ಈ ಜಾಗದಲ್ಲಿ ಮೊದಲೇ ಕಿರಿದಾದ ರಸ್ತೆ ಇರುವ ಕಾರಣಕ್ಕೆ ಲಘು ವಾಹನ ಸವಾರರಿಗೆ ಇದು ಕಿರಿಕಿರಿ ಉಂಟಾಗುತ್ತಿದೆ. ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.