<p><strong>ತುಮಕೂರು:</strong> ಜಾತಿ ಗಣತಿ ಹತ್ತು ವರ್ಷಗಳ ಹಳೆಯ ವರದಿ. ಮರು ಸಮೀಕ್ಷೆ ನಡೆಸಬೇಕು ಎಂಬ ಕೆಲವರ ಬೇಡಿಕೆಯನ್ನು ಒಪ್ಪಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮರು ಸಮೀಕ್ಷೆ ಮಾಡಬೇಕು ಎಂದು ಹೇಳಿದ ತಕ್ಷಣ ಅವರ ಬೇಡಿಕೆಯನ್ನು ಒಪ್ಪಿದ್ದೇನೆ ಎಂದಲ್ಲ’ ಎಂದರು.</p>.<p>ಸಮೀಕ್ಷೆ ನಡೆಸಿದ ಸಮಯದಲ್ಲಿ ರಾಜ್ಯದ ಜನ ಸಂಖ್ಯೆ 5.50 ಕೋಟಿ ಇತ್ತು. ಈಗ 7.50 ಕೋಟಿಗೆ ಏರಿಕೆಯಾಗಿದೆ. ಆಗಲೂ ಕೆಲವರ ಸಮೀಕ್ಷೆ ಆಗಿಲ್ಲ. ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಇನ್ನೂ 2 ಕೋಟಿಗೂ ಹೆಚ್ಚು ಜನ ಸರ್ವೆ ವ್ಯಾಪ್ತಿಗೆ ಬಂದಿಲ್ಲ. ಹತ್ತು ವರ್ಷಗಳಿಗೆ ಒಮ್ಮೆ ಜನ ಗಣತಿ ನಡೆಯುತ್ತದಲ್ಲವೆ? ಅದೇ ರೀತಿ ಇದನ್ನೂ ಪರಿಗಣಿಸಬಹುದು ಎಂದು ಹೇಳಿದರು.</p>.<p>‘ಜಾತಿ ಗಣತಿ ವಿರೋಧಿಸಿ ಒಕ್ಕಲಿಗ ಸಮುದಾಯ ಸಭೆ ನಡೆಸಿ, ಚರ್ಚಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಅದರಲ್ಲಿ ಯಾವ ಅಂಶ ತಮಗೆ ಇಷ್ಟವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ. ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಹೇಳಿದರು.</p>.<p>ಜಾತಿ ಜನಗಣತಿ ವರದಿ ಸುಮಾರು 8–10 ಸಂಪುಟ ಇದೆ. ಇದನ್ನು ಸಂಪೂರ್ಣವಾಗಿ ಓದಲು ಮೂರು ತಿಂಗಳು ಬೇಕು. ಎಲ್ಲ ಸಚಿವರಿಗೂ ವರದಿಯ ಸಾರಾಂಶದ ಪ್ರತಿ ನೀಡಲಾಗಿದೆ. ಬಿಜೆಪಿಯವರು ಮೀಸಲಾತಿ ವಿರೋಧಿಗಳು ಹಾಗಾಗಿ ಜಾತಿ ಜನಗಣತಿ ವಿರೋಧಿಸುತ್ತಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಜಾತಿ ಗಣತಿ ಹತ್ತು ವರ್ಷಗಳ ಹಳೆಯ ವರದಿ. ಮರು ಸಮೀಕ್ಷೆ ನಡೆಸಬೇಕು ಎಂಬ ಕೆಲವರ ಬೇಡಿಕೆಯನ್ನು ಒಪ್ಪಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮರು ಸಮೀಕ್ಷೆ ಮಾಡಬೇಕು ಎಂದು ಹೇಳಿದ ತಕ್ಷಣ ಅವರ ಬೇಡಿಕೆಯನ್ನು ಒಪ್ಪಿದ್ದೇನೆ ಎಂದಲ್ಲ’ ಎಂದರು.</p>.<p>ಸಮೀಕ್ಷೆ ನಡೆಸಿದ ಸಮಯದಲ್ಲಿ ರಾಜ್ಯದ ಜನ ಸಂಖ್ಯೆ 5.50 ಕೋಟಿ ಇತ್ತು. ಈಗ 7.50 ಕೋಟಿಗೆ ಏರಿಕೆಯಾಗಿದೆ. ಆಗಲೂ ಕೆಲವರ ಸಮೀಕ್ಷೆ ಆಗಿಲ್ಲ. ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಇನ್ನೂ 2 ಕೋಟಿಗೂ ಹೆಚ್ಚು ಜನ ಸರ್ವೆ ವ್ಯಾಪ್ತಿಗೆ ಬಂದಿಲ್ಲ. ಹತ್ತು ವರ್ಷಗಳಿಗೆ ಒಮ್ಮೆ ಜನ ಗಣತಿ ನಡೆಯುತ್ತದಲ್ಲವೆ? ಅದೇ ರೀತಿ ಇದನ್ನೂ ಪರಿಗಣಿಸಬಹುದು ಎಂದು ಹೇಳಿದರು.</p>.<p>‘ಜಾತಿ ಗಣತಿ ವಿರೋಧಿಸಿ ಒಕ್ಕಲಿಗ ಸಮುದಾಯ ಸಭೆ ನಡೆಸಿ, ಚರ್ಚಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಅದರಲ್ಲಿ ಯಾವ ಅಂಶ ತಮಗೆ ಇಷ್ಟವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ. ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಹೇಳಿದರು.</p>.<p>ಜಾತಿ ಜನಗಣತಿ ವರದಿ ಸುಮಾರು 8–10 ಸಂಪುಟ ಇದೆ. ಇದನ್ನು ಸಂಪೂರ್ಣವಾಗಿ ಓದಲು ಮೂರು ತಿಂಗಳು ಬೇಕು. ಎಲ್ಲ ಸಚಿವರಿಗೂ ವರದಿಯ ಸಾರಾಂಶದ ಪ್ರತಿ ನೀಡಲಾಗಿದೆ. ಬಿಜೆಪಿಯವರು ಮೀಸಲಾತಿ ವಿರೋಧಿಗಳು ಹಾಗಾಗಿ ಜಾತಿ ಜನಗಣತಿ ವಿರೋಧಿಸುತ್ತಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>