<p><strong>ಪಾವಗಡ</strong>: ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದಗುಜರಾತ್ನಿಂದ ಬಂದಿದ್ದ 18 ಮಂದಿಯನ್ನು ತಾಲ್ಲೂಕಿನ ಕುರುಬರಹಳ್ಳಿ ಗೇಟ್ ಬಳಿಯ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ರಾತ್ರಿ ಕ್ವಾರಂಟೈನ್ ಮಾಡಲಾಗಿದೆ.</p>.<p>ತಬ್ಲಿಗಿಗಳನ್ನು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡುವ ವಿಚಾರ ತಿಳಿದು ಕುಟುಬರಹಳ್ಳಿ, ಬಾಲಮ್ಮನಹಳ್ಳಿ, ನಲಿಗಾನಹಳ್ಳಿ ಗುಂಡಾರ್ಲಹಳ್ಳಿ ಗ್ರಾಮಸ್ಥರು ವಸತಿ ನಿಲಯದ ಬಳಿ ಬಂದು ಕೂಡಲೇ ಅವರನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.</p>.<p>ಸದ್ಯ ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಸೋಂಕಿನ ಪ್ರಕರಣಗಳಿಲ್ಲ. ಈಗ ಗುಜರಾತ್ನಿಂದ ಬಂದಿದ್ದ ಇವರನ್ನು ವಸತಿ ನಿಲಯದಲ್ಲಿ ಇರಿಸುವುದರಿಂದ ಸುತ್ತ ಮುತ್ತಲ ಗ್ರಾಮಗಳಿಗೆ ಸಮಸ್ಯೆಯಾಗುತ್ತದೆ. ವೈ.ಎನ್.ಹೊಸಕೋಟೆಯವರನ್ನು ಇಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.</p>.<p>ರಾತ್ರಿಯಿಡೀ ವಸತಿ ನಿಲಯದ ಬಳಿಯೇ ಗ್ರಾಮಸ್ಥರು ಇದ್ದರು. ನಂತರ ಅಧಿಕಾರಿಗಳು ಈಗಾಗಲೇ ಇವರಿಗೆ ತಪಾಸಣೆ ನಡೆಸಲಾಗಿದೆ ಮತ್ತೊಮ್ಮೆ ತಪಾಸಣೆ ನಡೆಸಲಾಗುವುದು. ಯಾರಿಗೂ ಸೋಂಕು ದೃಢಪಟ್ಟಿಲ್ಲ ಎಂದು ಗ್ರಾಮಸ್ಥರ ಮನವೊಲಿಸಿದರು.</p>.<p>18 ಮಂದಿಯಲ್ಲಿ 13 ಮಂದಿ ತಾಲ್ಲೂಕಿನ ವೈ.ಎನ್.ಹೊಸಕೋಟೆಯವರು. ಉಳಿದ 5 ಮಂದಿ ಆಂಧ್ರ ಪ್ರದೇಶದವರು. ಆಂಧ್ರದ 5 ಮಂದಿ ವೈ.ಎನ್.ಹೊಸಕೋಟೆ ಯವರೊಂದಿಗೆ ಗುಜರಾತ್ಗೆ ಹೋಗಿದ್ದರು. ಅಹಮದಾಬಾದ್ನಿಂದ ಬಂದ ಇವರನ್ನು ಚಿತ್ರದುರ್ಗ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದಾರೆ. ನಂತರ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಬ್ಲಿಗಿಗಳು ಬರುವ ವಿಚಾರ ತಿಳಿದು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಂಡರು.</p>.<p>ಉಪವಿಬಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಡಿವೈಎಸ್ಪಿ ಪ್ರವೀಣ್ ಸ್ಥಳಕ್ಕೆ ಬಂದು ಪರಿಶೀಲಿಸಿದರು. ತಹಶೀಲ್ದಾರ್ ವರದರಾಜು, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ತಿರುಪತಯ್ಯ, ಮುಖ್ಯಾಧಿಕಾರಿ ನವೀನ್ ಚಂದ್ರ, ಕಂದಾಯ ನಿರೀಕ್ಷಕ ರಾಜಗೋಪಾಲ್, ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ</strong>: ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದಗುಜರಾತ್ನಿಂದ ಬಂದಿದ್ದ 18 ಮಂದಿಯನ್ನು ತಾಲ್ಲೂಕಿನ ಕುರುಬರಹಳ್ಳಿ ಗೇಟ್ ಬಳಿಯ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ರಾತ್ರಿ ಕ್ವಾರಂಟೈನ್ ಮಾಡಲಾಗಿದೆ.</p>.<p>ತಬ್ಲಿಗಿಗಳನ್ನು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡುವ ವಿಚಾರ ತಿಳಿದು ಕುಟುಬರಹಳ್ಳಿ, ಬಾಲಮ್ಮನಹಳ್ಳಿ, ನಲಿಗಾನಹಳ್ಳಿ ಗುಂಡಾರ್ಲಹಳ್ಳಿ ಗ್ರಾಮಸ್ಥರು ವಸತಿ ನಿಲಯದ ಬಳಿ ಬಂದು ಕೂಡಲೇ ಅವರನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.</p>.<p>ಸದ್ಯ ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಸೋಂಕಿನ ಪ್ರಕರಣಗಳಿಲ್ಲ. ಈಗ ಗುಜರಾತ್ನಿಂದ ಬಂದಿದ್ದ ಇವರನ್ನು ವಸತಿ ನಿಲಯದಲ್ಲಿ ಇರಿಸುವುದರಿಂದ ಸುತ್ತ ಮುತ್ತಲ ಗ್ರಾಮಗಳಿಗೆ ಸಮಸ್ಯೆಯಾಗುತ್ತದೆ. ವೈ.ಎನ್.ಹೊಸಕೋಟೆಯವರನ್ನು ಇಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.</p>.<p>ರಾತ್ರಿಯಿಡೀ ವಸತಿ ನಿಲಯದ ಬಳಿಯೇ ಗ್ರಾಮಸ್ಥರು ಇದ್ದರು. ನಂತರ ಅಧಿಕಾರಿಗಳು ಈಗಾಗಲೇ ಇವರಿಗೆ ತಪಾಸಣೆ ನಡೆಸಲಾಗಿದೆ ಮತ್ತೊಮ್ಮೆ ತಪಾಸಣೆ ನಡೆಸಲಾಗುವುದು. ಯಾರಿಗೂ ಸೋಂಕು ದೃಢಪಟ್ಟಿಲ್ಲ ಎಂದು ಗ್ರಾಮಸ್ಥರ ಮನವೊಲಿಸಿದರು.</p>.<p>18 ಮಂದಿಯಲ್ಲಿ 13 ಮಂದಿ ತಾಲ್ಲೂಕಿನ ವೈ.ಎನ್.ಹೊಸಕೋಟೆಯವರು. ಉಳಿದ 5 ಮಂದಿ ಆಂಧ್ರ ಪ್ರದೇಶದವರು. ಆಂಧ್ರದ 5 ಮಂದಿ ವೈ.ಎನ್.ಹೊಸಕೋಟೆ ಯವರೊಂದಿಗೆ ಗುಜರಾತ್ಗೆ ಹೋಗಿದ್ದರು. ಅಹಮದಾಬಾದ್ನಿಂದ ಬಂದ ಇವರನ್ನು ಚಿತ್ರದುರ್ಗ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದಾರೆ. ನಂತರ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಬ್ಲಿಗಿಗಳು ಬರುವ ವಿಚಾರ ತಿಳಿದು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಂಡರು.</p>.<p>ಉಪವಿಬಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಡಿವೈಎಸ್ಪಿ ಪ್ರವೀಣ್ ಸ್ಥಳಕ್ಕೆ ಬಂದು ಪರಿಶೀಲಿಸಿದರು. ತಹಶೀಲ್ದಾರ್ ವರದರಾಜು, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ತಿರುಪತಯ್ಯ, ಮುಖ್ಯಾಧಿಕಾರಿ ನವೀನ್ ಚಂದ್ರ, ಕಂದಾಯ ನಿರೀಕ್ಷಕ ರಾಜಗೋಪಾಲ್, ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>