ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇವೇಗೌಡರು ಮುಖ್ಯಮಂತ್ರಿ ಆದ ಬಳಿಕ ತುಮಕೂರು ನಾಲೆಗೆ ಮಣ್ಣು ಸುರಿಸಿ ಪ್ರತಿಭಟನೆಎ ನಡೆಸಿದ್ದು ಯಾರು? ಹಾಸನಕ್ಕೆ 17 ಟಿಎಂಸಿ ನೀರು ನಿಗದಿ ಆಗಿದ್ದರೂ 40 ಟಿಎಂಸಿ ನೀರು ಬಳಕೆ ಏಕೆ? ಸುಪ್ರೀಂ ಕೋರ್ಟ್ 2013ರ ಮೇ 10ರಂದು ನೀಡಿದ ಆದೇಶದ ಅನ್ವಯ ಕೇಂದ್ರ ಸರ್ಕಾರ ಕಾವೇರಿ ಮೇಲುಸ್ತುವಾರಿ ಸಮಿತಿ ರಚಿಸುವುದಕ್ಕೆ ವಿರೋಧ ಮಾಡುತ್ತಿರುವುದು ಹಾಸನದಲ್ಲಿ ಕದ್ದು ಬಳಸುತ್ತಿರುವ ಹೇಮಾವತಿ ನೀರಿಗೋಸ್ಕರ ಅಲ್ಲವೇ ಎಂಬುದನ್ನು ದೇವೇಗೌಡರು ಸ್ಪಷ್ಟಪಡಿಸಬೇಕು ಎಂದು ಹೇಳಿದರು.