<p><strong>ಕುಣಿಗಲ್:</strong> ಪಟ್ಟಣದ ಸರ್ವೋದಯ ಫ್ರೌಢಶಾಲೆ ಸತತ ಎರಡನೇ ಬಾರಿಗೆ ಶೇ 100 ಫಲಿತಾಂಶ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ವಿ.ನಾಗರಾಜು ತಿಳಿಸಿದ್ದಾರೆ.</p>.<p>ಕಳೆದ ವರ್ಷಸಹ ಶೇ 100 ಫಲಿತಾಂಶ ಪಡೆದಿದ್ದು, ನಿರಂತರವೂ ಅದೇ ಫಲಿತಾಂಶ ಪಡೆಯಲೇ ಬೇಕು ಎಂಬ ಛಲದಿಂದ ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.</p>.<p>ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನಗದು ಬಹುಮಾನ ನೀಡಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವವರೆಗೆ ತಲಾ 10 ಸಾವಿರ ನಗದು ಬಹುಮಾನ ನೀಡುವುದುದಾಗಿ ಘೋಷಿಸಲಾಗಿತ್ತು ಎಂದರು.</p>.<p>ಪರೀಕ್ಷೆಯಲ್ಲಿ 45 ವಿದ್ಯಾರ್ಥಿಗಳ ಪೈಕಿ 21 ಉನ್ನತ ಶ್ರೇಣಿ ಮತ್ತು 24 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.</p>.<p><strong>ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಶಿಕ್ಷಕವರ್ಗ </strong></p>.<p>ಸತತ ಎರಡನೇ ಬಾರಿಗೆ ಎಸ್ಸೆಸ್ಸೆಲ್ಸಿ ಶೇ 100 ಫಲಿತಾಂಶ ಪಡೆದ ಕಾರಣ ಶಾಲೆಯ ಶಿಕ್ಷಕವರ್ಗದವರು ಪಟಾಕಿ ಸಿಡಿಸಿ ಮತ್ತು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಮತ್ತು ಪೋಷಕರಿಗೆ ಸಿಹಿ ಹಂಚಿ, ಹೂವಿನ ಹಾರಹಾಕಿ ಸಂಭ್ರಮಿಸಿದರು.</p>.<p>ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ವಿ.ನಾಗರಾಜು ಮಾತನಾಡಿ, ಪೋಷಕರ ಸಹಕಾರ ಮತ್ತು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತ್ತಿದೆ. ಅಲ್ಲದೆ ಪ್ರಜಾವಾಣಿಯ ಸಹಪಾಠಿ ಸಹ ಸಾಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.</p>.<p>ಮುಖ್ಯ ಶಿಕ್ಷಕ ಲೋಕೇಶ್, ಸಹಶಿಕ್ಷಕರಾದ ಗುರುಪ್ರಸಾಧ್, ಜಗದೀಶ್, ತುಳಸಿ, ಚೈತ್ರಾ, ಪ್ರಕಾಶ್, ವಿವೇಕ್ ರುದ್ರೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ಪಟ್ಟಣದ ಸರ್ವೋದಯ ಫ್ರೌಢಶಾಲೆ ಸತತ ಎರಡನೇ ಬಾರಿಗೆ ಶೇ 100 ಫಲಿತಾಂಶ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ವಿ.ನಾಗರಾಜು ತಿಳಿಸಿದ್ದಾರೆ.</p>.<p>ಕಳೆದ ವರ್ಷಸಹ ಶೇ 100 ಫಲಿತಾಂಶ ಪಡೆದಿದ್ದು, ನಿರಂತರವೂ ಅದೇ ಫಲಿತಾಂಶ ಪಡೆಯಲೇ ಬೇಕು ಎಂಬ ಛಲದಿಂದ ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.</p>.<p>ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನಗದು ಬಹುಮಾನ ನೀಡಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವವರೆಗೆ ತಲಾ 10 ಸಾವಿರ ನಗದು ಬಹುಮಾನ ನೀಡುವುದುದಾಗಿ ಘೋಷಿಸಲಾಗಿತ್ತು ಎಂದರು.</p>.<p>ಪರೀಕ್ಷೆಯಲ್ಲಿ 45 ವಿದ್ಯಾರ್ಥಿಗಳ ಪೈಕಿ 21 ಉನ್ನತ ಶ್ರೇಣಿ ಮತ್ತು 24 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.</p>.<p><strong>ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಶಿಕ್ಷಕವರ್ಗ </strong></p>.<p>ಸತತ ಎರಡನೇ ಬಾರಿಗೆ ಎಸ್ಸೆಸ್ಸೆಲ್ಸಿ ಶೇ 100 ಫಲಿತಾಂಶ ಪಡೆದ ಕಾರಣ ಶಾಲೆಯ ಶಿಕ್ಷಕವರ್ಗದವರು ಪಟಾಕಿ ಸಿಡಿಸಿ ಮತ್ತು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಮತ್ತು ಪೋಷಕರಿಗೆ ಸಿಹಿ ಹಂಚಿ, ಹೂವಿನ ಹಾರಹಾಕಿ ಸಂಭ್ರಮಿಸಿದರು.</p>.<p>ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ವಿ.ನಾಗರಾಜು ಮಾತನಾಡಿ, ಪೋಷಕರ ಸಹಕಾರ ಮತ್ತು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತ್ತಿದೆ. ಅಲ್ಲದೆ ಪ್ರಜಾವಾಣಿಯ ಸಹಪಾಠಿ ಸಹ ಸಾಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.</p>.<p>ಮುಖ್ಯ ಶಿಕ್ಷಕ ಲೋಕೇಶ್, ಸಹಶಿಕ್ಷಕರಾದ ಗುರುಪ್ರಸಾಧ್, ಜಗದೀಶ್, ತುಳಸಿ, ಚೈತ್ರಾ, ಪ್ರಕಾಶ್, ವಿವೇಕ್ ರುದ್ರೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>